Thursday, October 26, 2023

ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ಬೀಗ: ಕರವೇ ಎಚ್ಚರಿಕೆ

ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ಬೀಗ: ಕರವೇ ಎಚ್ಚರಿಕೆ

ಪಿಡಿಒಗೆ ಮನವಿ ಸಲ್ಲಿಸಿದ ಕರವೇ ಮುಖಂಡರು, ಗ್ರಾಮಸ್ಥರು

ಪಾಮನಕಲ್ಲೂರು (ಅ.26): ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿರುವ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸದಿದ್ದರೇ ಪಾಮನಕಲ್ಲೂರು ಗ್ರಾಮ ಪಂಚಾಯತಿ ಕಛೇರಿಗೆ ಬೀಗ ಹಾಕುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಯ ಹೋಬಳಿ ಘಟಕದ ಮುಖಂಡರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಮಣ್ಣರವರಿಗೆ ಎಚ್ಚರಿಕೆ ನೀಡಿದರು.
ಪಾಮನಕಲ್ಲೂರು ಗ್ರಾಮ ಪಂಚಾಯತಿಗೆ ಗುರುವಾರ ಮಧ್ಯಾಹ್ನ ಭೇಟಿ ನೀಡಿ ಗ್ರಾಮದಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಿದ ಅವರು, ನಾವು ಗ್ರಾಮದಲ್ಲಿನ ಚರಂಡಿ, ಕುಡಿಯುವ ನೀರು, ಸಿಸಿ ರಸ್ತೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೆ ಪಿಡಿಒರವರು ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಸ್ಥರಿಗೆ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೂರರಿಂದ 150 ದಿನಗಳ ಉದ್ಯೋಗ ಖಾತ್ರಿ ಕೆಲಸ ನೀಡಬೇಕು. ಇರಕಲ್ ಕೆರೆಯ ನೀರು ಗ್ರಾಮಕ್ಕೆ ಸರಿಯಾಗಿ ಬರುವಂತೆ ನೋಡಿಕೊಳ್ಳಬೇಕು. ಅಲ್ಲದೇ ಬೋರ್ವೆಲ್ ನೀರು ಕೂಡ ಒದಗಿಸಬೇಕು. ಗ್ರಾಮದಲ್ಲಿರುವ ಸ್ಮಶಾನದಲ್ಲಿರುವ ಜಾಲಿ ಸ್ವಚ್ಛಗೊಳಿಸಿ, ಸ್ಮಶಾನಕ್ಕೆ ತಡೆಗೋಡೆ (ಮುಳ್ಳು ತಂತಿ) ನೀರ್ಮಿಸಬೇಕು. ಗ್ರಾಮದಲ್ಲಿ ಸಿಸಿ ರಸ್ತೆ ದುರಸ್ತಿ ಮಾಡಬೇಕು. ಬೀದಿ ದೀಪಗಳನ್ನು ದುರಸ್ತಿ ಮಾಡಿಸಬೇಕು ಎಂಬ ಅನೇಕ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಕರವೇ ಮುಖಂಡರು ಪಿಡಿಒ ರಾಮಣ್ಣರವರಿಗೆ ಸಲ್ಲಿಸಿ, ಶೀಘ್ರವಾಗಿ ಪರಿಹರಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರವೇ ಹೋಬಳಿ ಘಟಕದ ಗೌರವಾಧ್ಯಕ್ಷ ಶಿವಾನಂದ ಹೂಗಾರ, ಅಧ್ಯಕ್ಷ ರಮೇಶ್ ಗಂಟ್ಲಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚೌಡ್ಲಿ, ಖಜಾಂಚಿ ಮಲ್ಲಪ್ಪ ಹಿರೇಮನೆ, ಗ್ರಾಮಸ್ಥರಾದ ಅಮರಯ್ಯಸ್ವಾಮಿ ಹೊರಗಿನಮಠ, ಚನ್ನಪ್ಪ ಪಲ್ಲೇದ್, ಮಲ್ಲಯ್ಯ ಸಂಗಮರಣ್ಣ, ರಾಜು ಬೊಂಬಾಯಿ, ದರ್ಮಪ್ಪ ಶಿರಹಟ್ಟಿ, ಹುಸೇನಪ್ಪ ಈಳಗೇರ, ದುರಗಪ್ಪ, ಅಮರೇಶ್ ಡಿ ಪೂಜಾರಿ, ಅಯ್ಯಣ್ಣ ನಾಯಕ ಪಾಮನಕಲ್ಲೂರು ಸೇರಿದಂತೆ ಅನೇಕರಿದ್ದರು.
#ಪಾಮನಕಲ್ಲೂರು #ರಾಯಚೂರು #ಮಸ್ಕಿ #ಗ್ರಾಮ #ಪಂಚಾಯತಿ #ನ್ಯೂಸ್ #Pamanakallur #Maski #Raichur #Gram_Panchayat #News #Kannada

Tuesday, October 17, 2023

ಕೆ.ಪಿ.ಆರ್.ಎಸ್ ಪಾಮನಕಲ್ಲೂರು ಗ್ರಾಮ ಘಟಕ ರಚನೆ


ರಾಯಚೂರು (ಅ.17): ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘ (ಕೆಪಿಆರ್ಎಸ್) ದ ಗ್ರಾಮ ಘಟಕವನ್ನು ಸೋಮವಾರ ರಾತ್ರಿ ರಚಿಸಿ, ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಪಾಮನಕಲ್ಲೂರು ಗ್ರಾಮದ ಮಲ್ಲಪ್ಪ ಹಿರೇಮನಿ, ಪ್ರಧಾನ ಕಾರ್ಯದರ್ಶಿಯನ್ನಾಗಿ ಶ್ರೀನಿವಾಸ ಸಾನಬಾಳ, ಉಪಾಧ್ಯಕ್ಷರುಗಳನ್ನಾಗಿ ಬಸವರಾಜ ಛಲವಾದಿ, ಕನಕಪ್ಪ ಹರಿಜನ, ಸಹ ಕಾರ್ಯದರ್ಶಿಗಳನ್ನಾಗಿ ಯಮನಪ್ಪ ಯದ್ದಲದೊಡ್ಡಿ, ಹನುಮಂತ ಕಲ್ಲೂರು, ಖಜಾಂಚಿಯನ್ನಾಗಿ ರಾಜೇಶ ಬಾಂಬೆ, ಸದಸ್ಯರನ್ನಾಗಿ ನಾಗೇಶ ಟೂಬಾಕಿ, ರಮೇಶ್ ಕಲ್ಲೂರು, ಹುಲಗಪ್ಪ ಗಡ್ಡಿಮನಿ, ದೇವಪ್ಪ ಹೂನೂರು, ಪಿಡ್ಡಪ್ಪ ಶಿರಹಟ್ಟಿ, ಕರೆಪ್ಪ ಗಂಟ್ಲಿ, ದುರ್ಗಾಸಿಂಗ್ ರಜಪೂತ್, ರಂಗಪ್ಪ ಹರಕೇರಿ, ದುರುಗಪ್ಪ ಗಂಟ್ಲಿರವರನ್ನು  ನೇಮಕ ಮಾಡಲಾಗಿದೆ.

ಕೆಪಿಆರ್ಎಸ್ ನ ಜಿಲ್ಲಾ ಸಮಿತಿ ಸದಸ್ಯರಾದ ರಮೇಶ್ ವೀರಾಪೂರ್, ಮುಖಂಡರಾದ ನಿಂಗಪ್ಪ ವೀರಾಪೂರ್ ರವರು ನೂತನ ಘಟಕ ರಚಿಸಿ, ಪದಾಧಿಕಾರಿಗಳನ್ನು ನೇಮಿಸಿದರು.

ಈ ಸಂದರ್ಭದಲ್ಲಿ ರಮೇಶ್ ಗಂಟ್ಲಿ ಪಾಮನಕಲ್ಲೂರು, ಅಮರೇಶ ಡಿ ಪೂಜಾರಿ, ಅಯ್ಯಣ್ಣ ನಾಯಕ ಪಾಮನಕಲ್ಲೂರು ಸೇರಿದಂತೆ ಅನೇಕರಿದ್ದರು.