ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ವಾರ್ಡ್ ನಂಬರ್: 1ರ ಎಸ್ಸಿ ಹೋಣಿ ಹತ್ತಿರ ಕಳೆದ ಅನೇಕ ತಿಂಗಳುಗಳಿಂದ ಬಳಕೆ ನೀರು, ಕುಡಿಯುವ ನೀರಿನ ಸಮಸ್ಯೆ ಇದ್ದು, ಸಮಸ್ಯೆ ಪರಿಹರಿಸುವ ಕೆಲಸವನ್ನು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮಾಡುತ್ತಿಲ್ಲವೆಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಹೋಬಳಿ ಘಟಕದ ಅಧ್ಯಕ್ಷ ರಮೇಶ್ ಗಂಟ್ಲಿ, ಖಜಾಂಚಿ ಮಲ್ಲಪ್ಪ ಹಿರೇಮನಿ ಆರೋಪಿಸಿದ್ದಾರೆ.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಬಳಕೆ ನೀರಿನ ಸಮಸ್ಯೆ ಇವತ್ತು ನಿನ್ನೆಯದ್ದಲ್ಲ, ಕಳೆದ ಅನೇಕ ತಿಂಗಳುಗಳಿಂದ ಗ್ರಾಮಸ್ಥರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕುರಿತು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಅಮರೇಶಪ್ಪರವರಿಗೆ ಈಗಾಗಲೇ ಅನೇಕ ಭಾರಿ ತಿಳಿಸಿದ್ದೇವೆ. ಭೇಟಿಯಾದಾಗ, ಪೋನ್ ಮಾಡಿ ಹೇಳಿದಾಗೊಮ್ಮೆ ಸಮಸ್ಯೆ ಪರಿಹರಿಸುತ್ತೇವೆ ಎಂದು ಹೇಳುವ ಪಿಡಿಒ ಅಮರೇಶಪ್ಪರವರು ಇದುವರೆಗೂ ಗ್ರಾಮಸ್ಥರ ನೀರಿನ ಬವಣೆ ನೀಗಿಸಿಲ್ಲ. ಬರೀ ಮಾತಲ್ಲೇ ಮನೆ ಕಟ್ಟುವ ಕೆಲಸವನ್ನು ಪಿಡಿಒ ಮಾಡುತ್ತಿದ್ದಾರೆ.
ವಾರ್ಡ್ ನಂಬರ್ 1ರ ಎಸ್ಸಿ ಹೋಣಿ ಹತ್ತಿರ, ಗಡ್ಡೆ ಮೇಲಿನ ಮನೆಗಳು ಸೇರಿದಂತೆ ಅನೇಕ ಕಡೆಗಳಲ್ಲಿ ಸರಿಯಾಗಿ ನೀರು ಬರುತ್ತಿಲ್ಲ. ಟುಬಾಕಿ ದುರುಗಪ್ಪ ರವರ ಮನೆಯ ಹತ್ತಿರದಿಂದ ಪೂಜಪ್ಪರವರ ಮನೆಯವರಿಗೆ ಪೈಪ್ ಲೈನ್ ಮಾಡಬೇಕಾಗಿದ್ದು, ಈ ಹಿಂದೆಯೇ ಪೈಪ್ ಲೈನ್ ಮಾಡುವ ಸಲುವಾಗಿ ಗ್ರಾಮಸ್ಥರ ನೇತೃತ್ವದಲ್ಲಿ ಹಿಂದಿನ ಪಿಡಿಒ ಕೃಷ್ಣ ಸರ್ವೆ ಕಾರ್ಯ ನಡೆಸಿದ್ದರು. ಪಿಡಿಒ ಬದಲಾದರು ಪೈಪ್ ಲೈನ್ ವ್ಯವಸ್ಥೆ ಮಾಡಿಲ್ಲ ಎಂದು ಕರವೇ ಹೋಬಳಿ ಘಟಕದ ಅಧ್ಯಕ್ಷ ರಮೇಶ್ ಗಂಟ್ಲಿ, ಖಜಾಂಚಿ ಮಲ್ಲಪ್ಪ ಹಿರೇಮನಿ ಸೇರಿದಂತೆ ಕರವೇ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.
No comments:
Post a Comment