Tuesday, September 19, 2023

ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿಗೆ ಅಯ್ಯಣ್ಣ ನಾಯಕ ಪಾಮನಕಲ್ಲೂರು ರಾಜೀನಾಮೆ

ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿಗೆ ಅಯ್ಯಣ್ಣ ನಾಯಕ ಪಾಮನಕಲ್ಲೂರು ರಾಜೀನಾಮೆ

Ayyanna Nayaka Pamanakallur
ಅಯ್ಯಣ್ಣ ನಾಯಕ ಪಾಮನಕಲ್ಲೂರು

ರಾಯಚೂರು (ಸೆ.19): ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿಯ ರಾಜ್ಯ ಘಟಕದ ಮಾಧ್ಯಮ ಸಲಹೆಗಾರರು ಸ್ಥಾನಕ್ಕೆ ಯುವ ಪತ್ರಕರ್ತ (ಬರಹಗಾರ) ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಮೂಲದ ಅಯ್ಯಣ್ಣ ನಾಯಕ ಪಾಮನಕಲ್ಲೂರುರವರು ರಾಜೀನಾಮೆ ನೀಡಿದ್ದಾರೆ.

ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷರಾಗಿರುವ ರಾಜೇಶ್ ನಾಯಕರವರಿಗೆ ಸೋಮವಾರ ಸಂಜೆ ಅಯ್ಯಣ್ಣ ನಾಯಕ ಪಾಮನಕಲ್ಲೂರುರವರು ಪತ್ರ ಬರೆದಿದ್ದಾರೆ. 

‘ಇತ್ತೀಚಿನ ಕೆಲ ವರ್ಷಗಳ ಹಿಂದೆ ರಚಿಸಲಾಗಿದ್ದ ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿ (ರಿ) ರಾಜ್ಯ ಘಟಕದಲ್ಲಿ ತಾವು ನನಗೆ ರಾಜ್ಯ ಘಟಕದ ಮಾಧ್ಯಮ ಸಲಹೆಗಾರರು ಹುದ್ದೆ (ಸ್ಥಾನ) ನೀಡಿದ್ದಿರಿ. ಕಾರಣಾಂತರಗಳಿಂದ ನಾನು ತಾವು ನೀಡಿದ್ದ ರಾಜ್ಯ ಘಟಕದ ಮಾಧ್ಯಮ ಸಲಹೆಗಾರರು ಹುದ್ದೆ (ಸ್ಥಾನ) ಗೆ ಈ ಪತ್ರದ ಮೂಲಕ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ಪತ್ರವನ್ನು ಪರಿಗಣಿಸಿ ನನ್ನ ರಾಜೀನಾಮೆಯನ್ನು ಕೂಡಲೇ ಅಂಗೀಕಾರ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೀದ್ದೇನೆ.

ತಮ್ಮ ಸಮಿತಿಯಲ್ಲಿ ನನಗೆ ಅವಕಾಶ ನೀಡಿದ್ದ ಸಮಿತಿಯ ಸರ್ವ ಸದಸ್ಯರಿಗೂ ಮತ್ತು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನನ್ನೊಂದಿಗೆ ಇದ್ದು ಸಹಕರಿಸಿದ ಸರ್ವರಿಗೂ ಈ ಮೂಲಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಇನ್ನೂ ಮುಂದೆ ತಮ್ಮ ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿ (ರಿ) ಯ ಕಾರ್ಯಚಟುವಟಿಕೆಗಳಿಂದ ದೂರವಿರಲು ಬಯಸಿದ ನನಗೆ ತಾವು ಸಹಕರಿಸುವಿರಿ ಎಂದು ನಂಬಿದ್ದೇನೆ. ಮತ್ತೊಮ್ಮೆ ಸರ್ವರಿಗೂ ಧನ್ಯವಾದಗಳು. ತಮ್ಮ ಕಾರ್ಯಗಳಿಗೆ ಶುಭವಾಗಲಿ. ವಂದನೆಗಳು’ ಎಂದು ಅಯ್ಯಣ್ಣ ನಾಯಕ ಪಾಮನಕಲ್ಲೂರುರವರು ರಾಜೇಶ್ ನಾಯಕರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

No comments:

Post a Comment