Friday, November 15, 2019

ಪಾಮನಕಲ್ಲೂರು: ಕನಕದಾಸರ ನಾಮಫಲಕ ಅನಾವರಣ

ಪಾಮನಕಲ್ಲೂರು (ನ.15): ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ದಾಸಶ್ರೇಷ್ಟ ಕನಕದಾಸ ಜಯಂತೋತ್ಸವದ ಅಂಗವಾಗಿ ಕನಕದಾಸರ ನೂತನ ನಾಮಫಲಕ ಅನಾವರಣಗೊಳಿಸಲಾಯಿತು. ಗ್ರಾಮದೇವತೆ ದುರ್ಗಾದೇವಿ ದೇವಸ್ಥಾನದ ಆವರಣದಿಂದ ಆರಂಭವಾದ ಕನಕದಾಸರ ಭಾವಚಿತ್ರ ಮೆರವಣಿಗೆ ಬಸ್ಟಾಂಡ್ ಸರ್ಕಲ್ ವರೆಗೂ ನಡೆಯಿತು. ಈ ವೇಳೆ ಡೊಳ್ಳು ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕನಕದಾಸರ ನೂತನ ನಾಮಫಲಕ (ಬೋರ್ಡ್) ಅನಾವರಣ ಕಾರ್ಯಕ್ರಮದಲ್ಲಿ ವಿವಿಧ ಜಾತಿ, ಜನಾಂಗ, ವಿವಿಧ ಧರ್ಮದ ನೂರಾರು ಜನರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು ತಂದರು. ಅಲ್ಲದೇ ಗ್ರಾಮದಲ್ಲಿರುವ ಅಂಬೇಡ್ಕರ್, ವಾಲ್ಮೀಕಿ, ಅಂಬಿಗರ ಚೌಡಯ್ಯ, ಒಳಬಳ್ಳಾರಿ ಚನ್ನಬಸವೇಶ್ವರ ತಾತ ಸೇರಿದಂತೆ ವಿವಿಧ ನಾಮಫಲಕಗಳಿಗೂ ಪೂಜೆ ಸಲ್ಲಿಸಿದ್ದು‌ ವಿಶೇಷವಾಗಿತ್ತು. ಗ್ರಾಮದಲ್ಲಿ ನಡೆಯುವ ಪ್ರತಿಯೊಂದು ಜಯಂತೋತ್ಸವ ಸಂದರ್ಭದಲ್ಲಿ ಇದೇ ರೀತಿ ಎಲ್ಲಾ ನಾಮಫಲಕಗಳಿಗೂ ಪೂಜೆ ಸಲ್ಲಿಸಲಾಗುತ್ತಿದ್ದು, ಇದು ಭಾವೈಕ್ಯತೆಯ ಸಂಕೇತವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಕಾರ್ಯಕ್ರಮದಲ್ಲಿ ಆದಯ್ಯ, ನಿಂಗಪ್ಪ ಮಾಸ್ತರ, ಗ್ರಾಮ ಪಂಚಾಯ್ತಿ ಸದಸ್ಯ ಅಯ್ಯಣ್ಣ, ಅಯ್ಯಪ್ಪ ಅಮರಪ್ಪ, ದುರುಗಪ್ಪ, ಬಸವರಾಜ ರೋಡಲಬಂಡಾ, ಬಸವರಾಜ, ಬಸಣ್ಣ, ಶಿವು ವಾಟರ್ ಮ್ಯಾನ್, ಮಾಳಪ್ಪ, ಮಾಂಕಾಳೆಪ್ಪ, ಮಲ್ಲಿಕಾರ್ಜುನ ನಾಲ್ವಾರಕರ್, ಅಮರಯ್ಯ ಸ್ವಾಮಿ ಸೇರಿದಂತೆ ಹಾಲುಮತ ಕುರುಬ ಸಮುದಾಯದ ಮುಖಂಡರು, ವಿವಿಧ ಜಾತಿ, ಧರ್ಮದ ಮುಖಂಡರು ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

No comments:

Post a Comment