Thursday, February 27, 2020

ರಾಯಚೂರು: ನ್ಯಾಯವಾದಿಗಳ ಸಂಘಕ್ಕೆ ಜೆ ಬಸವರಾಜ ಅಧ್ಯಕ್ಷ

ದೊರೆ ನ್ಯೂಸ್ ಕನ್ನಡ: ರಾಯಚೂರು ನ್ಯಾಯವಾದಿಗಳ ಸಂಘಕ್ಕೆ ಜೆ ಬಸವರಾಜ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಹೀರಾಪುರ್ ಈರಣ್ಣ ಉಪಾಧ್ಯಕ್ಷರಾಗಿ, ಶಿವಕುಮಾರ್ ನಾಯಕ ಪ್ರಧಾನ ಕಾರ್ಯದರ್ಶಿಯಾಗಿ, ಜಗದೀಶ್ ಹಿರೇಮಠ ಜಂಟಿ ಕಾರ್ಯದರ್ಶಿಯಾಗಿ, ಪ್ರಸಾದ್ ಎಚ್.ಬಿ ಜೈನ್ ಖಜಾಂಚಿಯಾಗಿ ಚುನಾಯಿತರಾಗಿದ್ದಾರೆ.
ಸಹಾಯಕ ಚುನಾವಣಾ ಅಧಿಕಾರಿ ವಕೀಲರಾದ ರಾಜಕುಮಾರ, ಚುನಾವಣಾಧಿಕಾರಿ ವಕೀಲರಾದ ಎ ಶ್ರೀನಿವಾಸ ನೇತೃತ್ವದಲ್ಲಿ ರಾಯಚೂರು ನ್ಯಾಯವಾದಿಗಳ ಸಂಘದ ನೂತನ ಘಟಕದ ಚುನಾವಣೆ ನಡೆಸಲಾಗಿದೆ.
ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿಯಾಗಿ ಚುನಾಯಿತರಾದ ವಕೀಲರಿಗೆ ಅನೇಕರು ಶುಭ ಹಾರೈಸಿದ್ದಾರೆ.

No comments:

Post a Comment