Friday, June 23, 2023

ಪಟಪಳ್ಳಿಯ ಆನಂದರೆಡ್ಡಿಗೆ ಪಿಹೆಚ್ಡಿ ಪದವಿ ಪ್ರದಾನ

ಪಟಪಳ್ಳಿಯ ಆನಂದರೆಡ್ಡಿಗೆ ಪಿಹೆಚ್ಡಿ ಪ್ರದಾನ

ಆನಂದರೆಡ್ಡಿ ಪಿಹೆಚ್‌ಡಿ ಪದವಿ ಸ್ವೀಕರಿಸಿದ ಕ್ಷಣ...

ದೊರೆ ನ್ಯೂಸ್ ಕನ್ನಡ, ಕಲಬುರಗಿ (ಜೂ.23): ಜಿಲ್ಲೆಯ ಚಿಂಚೋಳಿ ತಾಲೂಕಿನ ಪಟಪಳ್ಳಿಯ ರೈತ ಕುಟುಂಬದ ಆನಂದರೆಡ್ಡಿಗೆ ಪಿಹೆಚ್‌ಡಿ ಪದವಿ ಪ್ರದಾನ ಮಾಡಲಾಗಿದೆ. 

ಪ್ರಾಥಮಿಕ ಶಿಕ್ಷಣವನ್ನು ಪಟಪಳ್ಳಿ, ಕೊಳ್ಳೂರು, ಐನೋಳ್ಳಿಯಲ್ಲಿ, ಪದವಿ ಪೂರ್ವ, ಪದವಿ ಶಿಕ್ಷಣವನ್ನು ಚಿಂಚೋಳಿಯಲ್ಲಿ, ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮುಗಿಸಿದ್ದ ಆನಂದರೆಡ್ಡಿರವರು "ನಮ್ಮ ಚಿಂಚೋಳಿ ತಾಲೂಕಿನ ಐತಿಹಾಸಿಕ ಸ್ಮಾರಕಗಳು - ಶಾತವಾಹನರ ಕಾಲದಿಂದ 1948ರವರೆಗೆ" ಎಂಬ ವಿಷಯದ ಮೇಲೆ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ಇತಿಹಾಸ ಅಧ್ಯಯನ ಹಾಗೂ ಸಂಶೋಧನಾ ವಿಭಾಗದಲ್ಲಿ ಡಾ. ವಿಜಯಕುಮಾರ್ ಸಾಲಿಮನಿರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದರು. ಇದೀಗ ಆನಂದರೆಡ್ಡಿರವರು ತಮ್ಮ ತಂದೆಯ ಆಸೆಯಂತೆ ಪಿಹೆಚ್‌ಡಿ ಪದವಿ ಪಡೆದುಕೊಂಡಿದ್ದಾರೆ. ರೆಡ್ಡಿರವರಿಗೆ ಪಿಹೆಚ್‌ಡಿ (ಡಾಕ್ಟರೇಟ್) ಪದವಿ ಲಭಿಸಿದ್ದಕ್ಕೆ ಅವರ ಕುಟುಂಬಸ್ಥರು, ಮಾರ್ಗದರ್ಶಕರು, ಗ್ರಾಮಸ್ಥರು ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.

ವರದಿ: ಅಯ್ಯಣ್ಣ ನಾಯಕ ಪಾಮನಕಲ್ಲೂರು

No comments:

Post a Comment