Friday, December 22, 2023

ಸರ್ಕಾರಗಳು ರೈತರ ಬೆನ್ನು ಮೂಳೆ ಮುರಿಯುವ ಕೆಲಸ ಮಾಡುತ್ತಿವೆ: ರಮೇಶ್ ವೀರಾಪೂರ್

ಸರ್ಕಾರಗಳು ರೈತನ ಬೆನ್ನು ಮೂಳೆ ಮುರಿಯುವ ಕೆಲಸ ಮಾಡುತ್ತಿವೆ: ರಮೇಶ್ ವೀರಾಪೂರ್

ಪಾಮನಕಲ್ಲೂರು (ಡಿ.22): ರೈತ ದೇಶದ ಬೆನ್ನೆಲುಬು, ರೈತನೇ ದೇಶದ ಶಕ್ತಿ ಎಂದು ಹೇಳುವ ಸರ್ಕಾರಗಳು ರೈತನ ಬೆನ್ನು ಮೂಳೆ ಮೂರಿಯುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಸಾಗುತ್ತೀವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ (ಕೆ.ಪಿ.ಆರ್.ಎಸ್) ದ ಜಿಲ್ಲಾ ಸಮಿತಿ ಸದಸ್ಯ ರಮೇಶ್ ವೀರಾಪೂರ್ ರವರು ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ನೂತನವಾಗಿ ರಚನೆಯಾಗಿರುವ ಕರ್ನಾಟಕ ಪ್ರಾಂತ ರೈತ ಸಂಘ (ಕೆ.ಪಿ.ಆರ್.ಎಸ್)ದ ಗ್ರಾಮ ಘಟಕದ ನಾಮಫಲಕವನ್ನು ಸಸಿಗೆ ನೀರು ಹಾಕುವ ಮೂಲಕ ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿಯವರೆಗೂ ದೇಶ ಮತ್ತು ರಾಜ್ಯವನ್ನಾಳಿದ ಸರ್ಕಾರಗಳು ರೈತ ದೇಶದ ಬೆನ್ನೆಲುಬು ಎಂದು ರಾಜಕೀಯ ಭಾಷಣ ಮಾಡಿ, ರೈತನ ಬೆನ್ನು ಮೂಳೆಯನ್ನು ಮುರಿಯುವ ಕೆಲಸ ಮಾಡಿವೆ. ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡದೆ ರೈತನನ್ನು ಕೇವಲ ದುಡಿಯುವ ಯಂತ್ರವನ್ನಾಗಿ ಮಾಡಿವೆ. ಸರ್ಕಾರಗಳು ದೇಶದ ರೈತರನ್ನು ಮೂಲೆಗುಂಪು ಮಾಡಿಕೊಂಡು ಸಾಗುತ್ತೀವೆ.
ರಾಜ್ಯದಲ್ಲಿ ಅದರಲ್ಲೂ ನಮ್ಮ ಭಾಗದ ಕೆಲವು ಕಡೆಗಳಲ್ಲಿ ನೀರಾವರಿ ಆಗಿರುವುದರ ಹಿಂದೆ ಕರ್ನಾಟಕ ಪ್ರಾಂತ ರೈತ ಸಂಘದ ಕೊಡುಗೆ ಕೂಡ ಇದೆ. ಚಂದ್ರಶೇಖರ್ ಬಾಳೆ, ಪುರುಷೋತ್ತಮ್ ಕಲಾಲ್ ಬಂಡಿ ಸೇರಿದಂತೆ ಅನೇಕರ ಹೋರಾಟದ ಫಲದಿಂದ ನೀರಾವರಿ ಯೋಜನೆಗಳು ಆಗಿವೆ. ಈ ಹಿಂದೆ ಕೂಡ ಪಾಮನಕಲ್ಲೂರು ಗ್ರಾಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಇತ್ತು. ಈ ಸಂಘಕ್ಕೆ ತನ್ನದೆಯಾದ ಶಕ್ತಿ, ಸಾಮರ್ಥ್ಯ ಇದೆ ಎಂದು ರಮೇಶ್ ವೀರಾಪೂರ್ ರವರು ಹೇಳಿದರು.
ಇದೇ ವೇಳೆ ಮಾತನಾಡಿದ ಸಿಐಟಿಯು ಮುಖಂಡ ಮಹ್ಮದ್ ಹನೀಫ್ ರವರು, ಸಂಘಟನೆ ಎಂದರೇನು, ಸಂಘಟನೆ ಯಾವ ರೀತಿಯಲ್ಲಿ ಇರಬೇಕು. ಹೋರಾಟಗಳು ಹೇಗಿರಬೇಕು ಎಂಬುದರ ಬಗ್ಗೆ ತಿಳಿಸಿದರು. ಕೆ.ಪಿ.ಆರ್.ಎಸ್ ಮುಖಂಡ ನಿಂಗಪ್ಪ ಎಂ.ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೆ.ಪಿ.ಆರ್.ಎಸ್ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಪಾಮನಕಲ್ಲೂರು ಗ್ರಾಮದ ಮಲ್ಲಿಕಾರ್ಜುನ್ ನಾಲ್ವಾರ್ಕರ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಆರ್.ಎಸ್ ಮಸ್ಕಿ ತಾಲೂಕು ಮುಖಂಡ ದುರುಗೇಶ ತಲೆಖಾನ್, ಪಾಮನಕಲ್ಲೂರು ಗ್ರಾಮ ಘಟಕದ ಅಧ್ಯಕ್ಷ ಮಲ್ಲಪ್ಪ ಹಿರೇಮನಿ, ಕಾರ್ಯದರ್ಶಿ ಶ್ರೀನಿವಾಸ ಸಾನಬಾಳ (ಚಿನ್ನಪ್ಪ), ಉಪಾಧ್ಯಕ್ಷ ಬಸವರಾಜ ಚಲುವಾದಿ, ಕನಕಪ್ಪ ಎಸ್.ಸಿ, ಪ್ರಮುಖರಾದ ಮಲ್ಲೇಶ, ಅಲ್ಲಾಭಕ್ಷ ಗಿರಿಣಿ, ಅಮರೇಶ ಕಟ್ಟಿಮನಿ, ವಿಶ್ವ ಅಂಗಡಿ, ರಮೇಶ ಗಂಟ್ಲಿ, ಅಮರೇಶ್ ಡಿ ಪೂಜಾರಿ, ಅಮರಯ್ಯ ತಾತ, ರಮೇಶ ಗಂಟ್ಲಿ, ಬಸಣ್ಣ ಕುರುಬರ್, ಅಮೃತ್ ಟೈಲರ್, ಅಮರಪ್ಪ ಕಲ್ಲೂರುರವರು ಸೇರಿದಂತೆ ಗ್ರಾಮಸ್ಥರು, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ರೈತರು ಇದ್ದರು.
#ಪಾಮನಕಲ್ಲೂರು #ಪಿಡಿಒ #ಪಿಡಿಓ #ರಾಮಣ್ಣ #ನ್ಯೂಸ್ #ಪಂಚಾಯತಿ #ಗ್ರಾಮ_ಪಂಚಾಯತಿ #Pdo #pamanakallur #News #PDO_News #Ramanna #KPRS #Raita_Sangha #Raita #Sangha #ಕೆಪಿಆರ್ಎಸ್ #ರೈತ #ಸಂಘ #ರೈತ_ಸಂಘ

No comments:

Post a Comment