ದೊರೆ ನ್ಯೂಸ್ ಕನ್ನಡ: ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಚಿಸಲಾದ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಆಯೋಗವನ್ನು ಪರಿಶಿಷ್ಟ ಪಂಗಡ ಜನಾಂಗದ ತಜ್ಞರ ತಂಡ ಭೇಟಿಯಾಗಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿತು.
ನಿಯೋಗದ ಕಛೇರಿಗೆ ಭೇಟಿ ನೀಡಿದ ತಜ್ಞರು, ಸ್ವಾತಂತ್ರ್ಯ ಪೂರ್ವದಲ್ಲಿ ಬುಡಕಟ್ಟುಗಳ ಬೆಳವಣಿಗೆ, ಈ ಸಮುದಾಯದ ಮೀಸಲಾತಿ ಸಂಬಂಧ ಕೇಂದ್ರ ರಾಜ್ಯ ಸರ್ಕಾರದ ಆದೇಶಗಳು, ತಾರತಮ್ಯಗಳ ಕುರಿತು ಅತ್ಯಮೂಲ್ಯವಾದ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಿದರು. ನಿಯೋಗದ ಪ್ರತಿನಿಧಿಗಳ ವಿಚಾರ ಮಂಡನೆ ಅದ್ಬುತವಾಗಿತ್ತು. ಮತ್ತೆರಡು ಸಲ ಆಯೋಗದ ಎದುರು ದಾಖಲೆಗಳನ್ನು ಸಲ್ಲಿಸಲು ಈ ನಿಯೋಗಕ್ಕೆ ಅವಕಾಶ ಸಿಗಲಿದ್ದು, ಈ ನಿಯೋಗದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಶಿವಪ್ಪ, ನಿವೃತ್ತ ಕೆಎಎಸ್ ಅಧಿಕಾರಿ ಮೃತ್ಯುಂಜಯ, ನಿವೃತ್ತ ನ್ಯಾಯಾಧೀಶ ವೆಂಕಟಪ್ಪ ನಾಯಕ, ಮಲ್ಲೇಶಪ್ಪ ನಾಯಕ ಇತರರು ಇದ್ದರು.
ಈ ಸಂದರ್ಭದಲ್ಲಿ ಆಯೋಗದ ಕಾರ್ಯದರ್ಶಿ ಮುಲ್ಲಾ ಸಾಹೇಬ್, ವಕೀಲರಾದ ಅನಂತನಾಯಕ, ಡಾ ಟಿ.ಆರ್ ಚಂದ್ರಶೇಖರ, ರಾಜಶೇಖರ, ವಾಲ್ಮೀಕಿ ನಿಗಮದ ಎಂಡಿ ಹನುಮ ನರಸಯ್ಯ ಸೇರಿದಂತೆ ಅನೇಕರು ಇದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )
Super brother
ReplyDeleteSuper brother
ReplyDelete