Wednesday, March 25, 2020

ರಾಯಚೂರು ಜಿಲ್ಲೆಯಲ್ಲಿ ಮೊದಲ ಕೊರೊನಾ ಹುಚ್ಚು..!?

ಕೊರೊನಾ ವೈರಸ್ ಕೋವಿಡ್ ೧೯ ಜನರಲ್ಲಿ ಎಷ್ಟರ ಮಟ್ಟಿಗೆ ಭಯ, ಆತಂಕ ಹುಟ್ಟಿಸಿದೆ ಎಂಬುದನ್ನು ಪ್ರತಿನಿತ್ಯ ಮಾಧ್ಯಮಗಳು ಜನರಿಗೆ ತಿಳುವಳಿಕೆ ನೀಡುವ ಪ್ರಾಮಾಣಿಕ ಕೆಲಸ ಮಾಡುತ್ತಿವೆ. ಕೊರೊನಾ ವೈರಸ್ ಬಗ್ಗೆ ಭಯ ಬೇಡ ಎಚ್ಚರ ಇರಲಿ ಎಂಬ ಸಂದೇಶಗಳನ್ನು ದೃಶ್ಯ, ಶ್ರವಣ, ಮುದ್ರಣ ಮಾಧ್ಯಮಗಳು ಜಗತ್ತಿಗೆ ಸಾರಿ ಸಾರಿ ಹೇಳುತ್ತಿವೆ.
ಈ ನಡುವೆ ಬರದ ನಾಡು ಚಿನ್ನದ ಬಿಡು ಎಂದು ಕರೆಯುವ ಬಿಸಿಲು ನಾಡು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಸಮೀಪದ ಯರಗುಡ್ಡದ ರಂಗಪ್ಪ ದಂಡಪ್ಪ ಎಂಬ ವ್ಯಕ್ತಿಯೋರ್ವ ಕೊರೊನಾ ವೈರಸ್ ಬಗ್ಗೆ ತೀವ್ರವಾಗಿ ತಲೆ ಕೆಡಸಿಕೊಂಡಿದ್ದಾನೆ.
ಪದವಿ ಪೂರ್ವದ ವರೆಗೂ ಶಿಕ್ಷಣ ಪಡೆದ ರಂಗಪ್ಪ ಕುರಿ ಕಾಯುವ ಕೆಲಸ ಮಾಡ್ತಿದ್ದು, ಕಳೆದ ಕೆಲ ದಿನಗಳಿಂದ ದೃಶ್ಯ ಮಾಧ್ಯಮಗಳಲ್ಲಿ ಬರುವ ಕೊರೊನಾ ವೈರಸ್ ಸುದ್ದಿಗಳನ್ನು ನೋಡಿ ಮಾನಸಿಕ ಕಿನತೆಗೆ ಒಳಗಾಗಿದ್ದಾನೆ ಎನ್ನಲಾಗಿದೆ.
ರಂಗಪ್ಪನಿಗೆ ಸ್ಥಳೀಯ ವೈದ್ಯ ಡಾ.ಆರ್.ಎಸ್ ಹುಲಿಮನಿ ಎಂಬುವವರು ಚಿಕಿತ್ಸೆ ನೀಡಿದ್ದು, ಅವರಿಗೆ ವೈರಸ್ ಬಗ್ಗೆ ತಿಳುವಳಿಕೆ ಮೂಡಿಸಿ ಧೈರ್ಯದಿಂದ ಇರುವಂತೆ ತಿಳಿ ಹೇಳಿದ್ದಾರೆ‌. ವೈದ್ಯರ ಸಲಹೆಯ ನಂತರ ರಂಗಪ್ಪ ಕೊರೊನಾ ವೈರಸ್ ಬಗೆಗಿನ ಭಯದಿಂದ ಸ್ವಲ್ಪ ಮಟ್ಟಿಗೆ ಹೊರ ಬಂದಿದ್ದಾರೆ ಎನ್ನಲಾಗಿದೆ. 
ಒಟ್ಟಾರೆಯಾಗಿ ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಸಮಾಜದಲ್ಲಿ ಧೈರ್ಯದಿಂದ ಬಾಳಿ ಬದುಕ ಬೇಕಾಗಿರುವ ಜನರು ಕೊರೊನಾ ವೈರಸ್ ಬಗ್ಗೆ ತಲೆ ಕೆಡಸಿಕೊಂಡು ಮಾನಸಿಕ ಅಸ್ವಸ್ಥರಂತೆ ಆಗುತ್ತಿರುವುದು ದುರಂತದ ಸಂಗತಿ ಎನ್ನಬಹುದಾಗಿದೆ.

No comments:

Post a Comment