Saturday, June 12, 2021

ಪಾಮನಕಲ್ಲೂರು ಗ್ರಾಮ ಹಾಗೂ ಗ್ರಾಮದ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಮಹಿಮೆ

ಶ್ರೀ ಆದಿ ಬಸವೇಶ್ವರ ದೇವಸ್ಥಾನ ಪಾಮನಕಲ್ಲೂರು
ಪಾಮನಕಲ್ಲೂರು ಗ್ರಾಮ ಹಾಗೂ ಗ್ರಾಮದ ಶ್ರೀ ಆದಿ ಬಸವೇಶ್ವರ ದೇವಸ್ಥಾನದ ಮಹಿಮೆ

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮವೂ ರಾಯಚೂರಿನಿಂದ ಲಿಂಗಸುಗೂರಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಬರುವ ಗ್ರಾಮವಾಗಿದೆ. ಪಾಮನಕಲ್ಲೂರು ಗ್ರಾಮವೂ ಲಿಂಗಸುಗೂರು ನಗರದಿಂದ ರಾಯಚೂರಿಗೆ ಹೋಗುವಾಗ ಸುಮಾರು 18 ಕಿ.ಮೀ ದೂರದಲ್ಲಿ ಬರುತ್ತದೆ. ಈ ಗ್ರಾಮವೂ ಹೋಬಳಿ ಕೇಂದ್ರವಾಗಿದ್ದು. ಇಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೂ ಶಾಲೆಗಳಿವೆ. ಆಂಗ್ಲ ಮಾಧ್ಯಮ ಶಾಲೆಗಳೂ ಇವೆ. ಗ್ರಾಮ ಪಂಚಾಯ್ತಿ, ನಾಡಕಛೇರಿ ಸೇರಿದಂತೆ ವಿವಿಧ ಸರ್ಕಾರಿ ಕಛೇರಿಗಳೂ ಇವೆ.  

ಇಲ್ಲಿ ಪ್ರತಿವರ್ಷವೂ ಬಸವೇಶ್ವರ ಜಯಂತಿಯ ದಿನದಂದು ಶ್ರೀ ಆದಿ ಬಸವೇಶ್ವರ ಜಾತ್ರೆ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಪಾಮನಕಲ್ಲೂರು ಮತ್ತು ಸುತ್ತಮುತ್ತಲಿರುವ ಗ್ರಾಮಗಳಲ್ಲಿ ಇದೊಂದು ದೊಡ್ಡ ಜಾತ್ರೆಯಾಗಿದ್ದು. ಈ ಜಾತ್ರೆಗೆ ಸುಮಾರು ವರ್ಷಗಳ ಇತಿಹಾಸವಿದೆ. ಅಲ್ಲದೇ ಕಳೆದ ಕೆಲವು ವರ್ಷಗಳಿಂದ ಸಾಮೂಹಿಕ ವಿವಾಹಗಳನ್ನು ಜಾತ್ರೆಯ ನಿಮಿತ್ಯ ಹಮ್ಮಿಕೊಳ್ಳಲಾಗುತ್ತಿದೆ. ಸುಮಾರು 101 ವಿವಾಹಗಳ ಗರಿಷ್ಠ ಮೀತಿಯವರೆಗೂ ಇಲ್ಲಿ ಸಾಮೂಹಿಕ ವಿವಾಹಗಳು ಪ್ರತಿ ವರ್ಷವೂ ನಡೆಯುತ್ತವೆ.

 

ಆದಿ ಬಸವೇಶ್ವರ ಜಾತ್ರೆಯ ವಿಶೇಷತೆ:

 

ಪಾಮನಕಲ್ಲೂರು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿದ ನಗರವೂ ಅಲ್ಲ. ಇತ್ತ ಕ್ಕುಗ್ರಾಮವೂ ಅಲ್ಲ. ಬೆಳೆಯುತ್ತಿರುವ ಗ್ರಾಮವಾಗಿದ್ದು. ಪಾಮನಕಲ್ಲೂರು ಗ್ರಾಮದಲ್ಲಿ ಅನೇಕ ಜಾತ್ರೆಗಳು ನಡೆದರು ಆದಿ ಬಸವೇಶ್ವರ ಜಾತ್ರೆಯಷ್ಟು ಅದ್ದೂರಿಯಾಗಿ ಇರುವುದಿಲ್ಲ. ಆದಿ ಬಸವೇಶ್ವರ ಜಾತ್ರೆಗೆ ಸುತ್ತ ಮುತ್ತಲಿನ ಗ್ರಾಮಸ್ಥರಲ್ಲದೇ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತರು ಬಂದು ದರ್ಶನ ಪಡೆದುಕೊಂಡು ಹೋಗುತ್ತಾರೆ. ಇದು ನೋಡುಗರ ಮನ ಸೆಳೆಯುತ್ತದೆ.

ಆದಿ ಬಸವೇಶ್ವರ ಜಾತ್ರೆಯೂ ಸುಮಾರು ವರ್ಷಗಳಿಂದ್ದಲೂ ನಡೆಯುತ್ತಾ ಬಂದಿದ್ದು. ಮೊದಲಿಗೆ ದೇವಸ್ಥಾನ ಚಿಕ್ಕದಾಗಿತ್ತು. ಆದರೇ ಕಳೆದ ಕೆಲ ವರ್ಷಗಳ ಹಿಂದೆ ಗುಡಿ (ದೇವಸ್ಥಾನ)ಯನ್ನು ದೊಡ್ಡದಾಗಿ ಕಟ್ಟಲಾಗಿದೆ. ತುಂಬ ಸುಂದರವಾಗಿದೆ. ಅಲ್ಲದೇ ವಿಶಾಲವಾಗಿದೆ. ಗ್ರಾಮದಿಂದ ಸುಮಾರು 01.05 ಕಿ.ಮೀ ದೂರದಲ್ಲಿರುವ ದೇವಸ್ಥಾನ ಪಾಮನಕಲ್ಲೂರಿನಿಂದ ಚಿಕ್ಕಹೆಸರೂರು ಕಡೆಗೆ ನಡೆದರೆ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಇದೆ.

 ದೇವಸ್ಥಾನದ ಎದುರುಗಡೆ ಪಾಮನಕಲ್ಲೂರಿನ ಸರ್ಕಾರಿ ಪ್ರೌಡ ಶಾಲೆ ಇದೆ. ಅದರ ಪಕ್ಕದಲ್ಲಿ ಪಾಮನಕಲ್ಲೂರಿನ ಸುಂದರವಾದ ಮಹರ್ಷಿ ವಾಲ್ಮೀಕಿ ಭವನ ಇದೆ. ಅದರ ಹಿಂದುಗಡೆ ವಸತಿ ನಿಲಯವಿದೆ. ಇನ್ನೂ ಸುತ್ತಮುತ್ತ ವಿವಿಧ ಸರ್ಕಾರಿ ಕಟ್ಟಡಗಳು ನಿರ್ಮಾಣಗೊಂಡಿವೆ.

 

ಪಾಮನಕಲ್ಲೂರಿನ ಆದಿ ಬಸವೇಶ್ವರನ ಮಹಿಮೆ:

 

ಪಾಮನಕಲ್ಲೂರಿನ ಆದಿ ಬಸವೇಶ್ವರನು ತುಂಬ ಶಕ್ತಿಶಾಲಿ ದೇವರಾಗಿದ್ದು. ನಂಬಿದ ಭಕ್ತರನ್ನು ಸದಾಕಾಲ ಕಾಪಾಡುತ್ತಾನೆ. ಆದರಿಂದ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜಾತ್ರೆ ಪ್ರಾರಂಭವಾಗಲು ಸಂತೆಕಲ್ಲೂರು ಮಠದ ಸ್ವಾಮಿಜಿಗಳು ಬಹಳಷ್ಟು ಪ್ರಯತ್ನ ಪಟ್ಟರು, ಬಸವೇಶ್ವರನ ದಯೆಯಿಂದ ಜಾತ್ರೆ ಪ್ರಾರಂಭವಾಗಿದೆ. ಅಂದಿನಿಂದ ಇಲ್ಲಿಯವರೆಗೂ ಪ್ರತಿ ವರ್ಷವೂ ಜಾತ್ರೆ ನಡೆಯುತ್ತಿದೆ. ಅಲ್ಲದೇ ಜಾತ್ರೆಯಲ್ಲಿ ಹುಚ್ಚಯ್ಯ ಎಳೆಯುತ್ತಾರೆ. ಕಳೆದ ಕೆಲ ವರ್ಷಗಳಿಂದ ರಥೋತ್ಸವವೂ ನಡೆಯುತ್ತಿದೆ.

 

ಆದಿ ಬಸವೇಶ್ವರನ ಇನ್ನೊಂದು ವಿಶೇಷ:

 

ಈ ಭಾಗದ ರೈತರು ಕೊಳವೆ ಬಾವಿಗಳನ್ನು ಕೊರೆಯಿಸಿದರೆ ವಿಫಲವಾಗುವುದಿಲ್ಲ. ಮತ್ತು ಈ ಭಾಗದ ರೈತರ ತೋಟಗಳಲ್ಲಿ ದೊರೆಯುವ ನೀರು ಸಿಹಿ ನೀರು. ಇದು ಆದಿ ಬಸವೇಶ್ವರನ ಮಹಿಮೆ ಎನ್ನುತ್ತಾರೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಜನರು.

 

ಏಳು ಊರುಗಳಿಗೆ ನೀರು ನೀಡಿದ ಗ್ರಾಮವಿದು:

 

ಪಾಮನಕಲ್ಲೂರು ಗ್ರಾಮದ ಸುತ್ತಮುತ್ತಲಿನ ಬಹತೇಕ ಗ್ರಾಮಗಳಲ್ಲಿ ಉಪ್ಪು ನೀರು ದೊರೆಯುತ್ತದೆ. ಆದರೆ ಈ ಪಾಮಕಲ್ಲೂರು ಗ್ರಾಮದಲ್ಲಿ ಸಿಹಿ ನೀರು ದೊರೆಯುತ್ತವೆ. ಕಳೆದ ಕೆಲವ ವರ್ಷಗಳ ಹಿಂದೆ ಪಾಮನಕಲ್ಲೂರು ಗ್ರಾಮದ ನೀರನ್ನೇ ಸುತ್ತಲೂ ಏಳು ಹಳ್ಳಿಗಳಿಗೆ ಸರಬರಾಜು ಮಾಡಲಾಗುತ್ತಿತ್ತು.

 
ಜಾತ್ರೆಯ ದಿನ ಇಲ್ಲವೇ ಒಂದು ದಿನ ಹಿಂದೆ, ಮುಂದೆ ಮಳೆ ಬಂದೇ ಬರುತ್ತೆ:

 

ಪ್ರತಿ ವರ್ಷವೂ ಆದಿ ಬಸವೇಶ್ವರ ಜಾತ್ರೆಯ ಒಂದು ದಿನ ಮುಂಚೆ ಅಥವಾ ಜಾತ್ರೆಯ ದಿನದಂದು ಮತ್ತು ಜಾತ್ರೆಯ ಮುರುದಿನವಾದರು ಮಳೆ ಬಂದೇ ಬರುತ್ತದೆ. ಇದು ಬಸವೇಶ್ವರನ ಮಹಿಮೆ ಎಂದು ಅನೇಕರು ಹೇಳುತ್ತಾರೆ. ಪಾಮನಕಲ್ಲೂರು ಗ್ರಾಮದ ಜನರಿಗೆ ಮಳೆಗಾಗಿ ಕಾದು ಕಾದು ಸಾಕಾದಾಗ ಜಾತ್ರೆಯ ದಿನದಂದು ಮಳೆ ತರುವ ಮೂಲಕ ಜನರ ಮನ ತಂಪ್ಪಾಗಿಸುತ್ತಾನೆ ಬಸವಣ್ಣ.

 
ಜಾತ್ರೆಯ ದಿನ ಬೆಳಗ್ಗೆಯಿಂದ ಸಂಜೆಯವರೆಗೂ ಪ್ರಸಾದ ವ್ಯವಸ್ಥೆ:

 

ಪಾಮನಕಲ್ಲೂರು ಗ್ರಾಮದಲ್ಲಿ ಬಸವ ಜಯಂತಿಯ ದಿನದಂದು ನಡೆಯುವ ಆದಿ ಬಸವೇಶ್ವರ ಜಾತ್ರೆಯಲ್ಲಿ ಪ್ರತಿ ವರ್ಷವೂ ಬೆಳಗ್ಗೆಯಿಂದ ಸಂಜೆಯವರೆಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿರುತ್ತದೆ. ಅಲ್ಲದೇ ವಿಶೇಷ ಸಂದರ್ಭಗಳಲ್ಲಿ, ಅಮವಾಸೆಯ ದಿನಗಳಂದು ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮಗಳು ನಡೆಯುತ್ತವೆ.

 
ಪ್ರತಿವರ್ಷ ನಡೆಯುತ್ತೆ ಅನ್ನದಾಸೋಹ:

 

ಪ್ರತಿ ವರ್ಷವೂ ಶ್ರೀಶೈಲಕ್ಕೆ ಪಾದ ಯಾತ್ರೆ ಮಾಡುವ ಭಕ್ತಾದಿಗಳಿಗೆ ಇಲ್ಲಿ ಅನ್ನ ದಾಸೋಹವನ್ನು ಸುಮಾರು ಒಂದು ವಾರದವರೆಗೂ ನಡೆಸಿಕೊಂಡು ಬರಲಾಗುತ್ತದೆ. ಪಾಮನಕಲ್ಲೂರು ಗ್ರಾಮವೂ ಕೃಷಿ ಸೇರಿದಂತೆ ಎಲ್ಲಾ ರೀತಿಯಿಂದಲೂ ಉತ್ತಮ ಗ್ರಾಮವಾಗಿದೆ. ಇದಕ್ಕೆಲ್ಲಾ ಆದಿಬಸವೇಶ್ವರನ ಕೃಪೆ ಎನ್ನುತ್ತಾರೆ ಪಾಮನಕಲ್ಲೂರು ಗ್ರಾಮದ ಭಕ್ತಾದಿಗಳು ಮತ್ತು ಶ್ರೀ ಆದಿಬಸವೇಶ್ವರ ದೇವಸ್ಥಾನ ಸಮಿತಿಯ ಯುವಕರು. ಇಂತಹ ಪುಣ್ಯ ಸ್ಥಳಗಳನ್ನು ಗುರುತಿಸಿ ಇನಷ್ಟು ಸೌಕರ್ಯಗಳನ್ನು ದೊರಕಿಸಿಕೊಡುವ ಮೂಲಕ ಐತಿಹಾಸಿಕ ಸ್ಥಳಗಳನ್ನಾಗಿ ಮತ್ತು ಪ್ರವಾಸಿ ತಾಣಗಳನ್ನಾಗಿ ಮಾಡಬೇಕಾಗಿರುವುದು ಸಂಬಂಧಿಸಿದ ಇಲಾಖೆಯ ಕರ್ತವ್ಯವಾಗಿದೆ. (ಮಾಹಿತಿ: ಪಾಮನಕಲ್ಲೂರು ಗ್ರಾಮದ ಹಿರಿಯರಿಂದ ಸಂಗ್ರಹಿಸಿದ್ದು).. (ವಿಶೇಷ ಲೇಖನ ಪತ್ರಕರ್ತ ಅಯ್ಯಣ್ಣ ನಾಯಕ ಪಾಮನಕಲ್ಲೂರು ಅವರು ಬರೆದಿರುವುದು.)

 

ವಿಶೇಷ ಲೇಖನ:
ಪತ್ರಕರ್ತ
ಅಯ್ಯಣ್ಣ ನಾಯಕ ಪಾಮನಕಲ್ಲೂರು

3 comments: