Monday, July 20, 2020

ತಾ.ಪಂ ಅಧ್ಯಕ್ಷ, ಬಿಜೆಪಿ ನಾಯಕರಿಗೆ ಯುವ ಮುಖಂಡರಿಂದ ಸನ್ಮಾನ


ದೊರೆ ನ್ಯೂಸ್ ಕನ್ನಡ, ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕು ಪಂಚಾಯ್ತಿಗೆ ನೂತನ ಅಧ್ಯಕ್ಷರಾಗಿ ಇತ್ತಿಚೆಗೆ ಆಯ್ಕೆಯಾದ ಶಿವಣ್ಣ ನಾಯಕ ವೆಂಕಟಾಪುರ ಹಾಗೂ ಬಿಜೆಪಿಯ ಯುವ ನಾಯಕ ಆರ್ ಸಿದ್ದನಗೌಡ ತುರವಿಹಾಳರವರನ್ನು ತಾಲೂಕಿನ ವಾಲ್ಮೀಕಿ ನಾಯಕ ಸಮಾಜದ ಯುವಕರು ಸನ್ಮಾನಿಸಿ ಗೌರವಿಸಿದರು.
ತಾಲೂಕಿನ ಜಿನ್ನಾಪುರ, ಹಾಲಾಪೂರ ಗ್ರಾಮಗಳಿಗೆ ಭೇಟಿ ನೀಡಿದ ಶಿವಣ್ಣ ನಾಯಕ, ಆರ್. ಸಿದ್ದನಗೌಡ ತುರವಿಹಾಳರವರನ್ನು ಎರಡು ಗ್ರಾಮಗಳ ವಾಲ್ಮೀಕಿ ನಾಯಕ ಸಮಾಜದ ಯುವಕರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ರಾಜ ಹೇಮಂತ್ ಕುಮಾರ್ ಜಿನ್ನಾಪುರ, ಹಿರೇನಾಯಕ ಸುಬೇದಾರ್ ಜಿನ್ನಾಪುರ, ಬಸವರಾಜ್ ತಡಕಲ್, ಬಸನಗೌಡ ಅಗದಾಳ, ಸೋಮನಾಥ ಪೊಲೀಸ್ ಪಾಟೀಲ್, ದೇವಣ್ಣ ಪೊಲೀಸ್ ಪಾಟೀಲ್, ಮರಿಸ್ವಾಮಿ ಯದ್ದಲದಿನ್ನಿ, ವಿಜಯಕುಮಾರ್ ನಾಯಕ ಹಣಿಗಿ, ಸೋಮನಗೌಡ ಮಾಲಿ ಪಾಟೀಲ್, ಸೋಮಣ್ಣ ಪೊಲೀಸ್ ಪಾಟೀಲ್ ಸೇರಿದಂತೆ ಅನೇಕರಿದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..

Friday, July 17, 2020

ವಿಜ್ಞಾನ ವಿಭಾಗದಲ್ಲಿ ಉತ್ತಮ ಫಲಿತಾಂಶ ಪಡೆದ ಭಾಗ್ಯಶ್ರೀಗೆ ಕರವೇಯಿಂದ ಸನ್ಮಾನ

ಸನ್ಮಾನ ಸ್ವೀಕರಿಸಿದ ಭಾಗ್ಯಶ್ರೀ,
ಚಂದ್ರಶೇಖರ ನಾಯಕ

ದೊರೆ ನ್ಯೂಸ್ ಕನ್ನಡ, ರಾಯಚೂರು: ದ್ವೀತಿಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 97.75% ರಷ್ಟು ಅಂಕಗಳನ್ನು ಪಡೆದು ಉತ್ತಮ ಸಾಧನೆಗೈದ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟ ಗ್ರಾಮದ ಭಾಗ್ಯಶ್ರೀ ತಂದೆ ಚಂದ್ರಶೇಖರ ನಾಯಕ ಎಂಬ ವಿದ್ಯಾರ್ಥಿನಿಯನ್ನು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಗ್ರಾಮ ಘಟಕದ ಮುಖಂಡರು ಸನ್ಮಾನಿಸಿ ಗೌರವಿಸಿದರು. 
ಲಿಂಗಸುಗೂರು ಪಟ್ಟಣದ ಸರ್ ಎಂ ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಭಾಗ್ಯಶ್ರೀ ಕಠಿಣ ಪರಿಶ್ರಮದೊಂದಿಗೆ ಉತ್ತಮ ಫಲಿತಾಂಶ ಪಡೆದುದರಿಂದ ಕರವೇ ಮುಖಂಡರು ಗೆಜ್ಜಲಗಟ್ಟ ಗ್ರಾಮದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡು ಭಾಗ್ಯಶ್ರೀ ಜೊತೆಗೆ ಅವರ ತಂದೆ ಚಂದ್ರಶೇಖರ ನಾಯಕರನ್ನು ಸನ್ಮಾನಿಸಿ ಗೌರವಿಸಿದರು. 
ಇದೇ ವೇಳೆ ಮಾತನಾಡಿದ ಕರವೇ ಮುಖಂಡರು, ಭಾಗ್ಯಶ್ರೀಯ ಸಾಧನೆ ನಮ್ಮೂರಿಗೆ ಮಾತ್ರವಲ್ಲ ತಾಲೂಕು, ಜಿಲ್ಲೆ, ರಾಜ್ಯಕ್ಕೆ ಮಾದರಿಯಾಗಿದೆ. ಈ ವಿದ್ಯಾರ್ಥಿನಿಯ ಸಾಧನೆ ಇತರರಿಗೂ ಮಾದರಿಯಾಗಲಿ ಎಂಬ ನಿಟ್ಟಿನಲ್ಲಿ ಸನ್ಮಾನ ಕಾರ್ಯಕ್ರಮ ಮಾಡಿದ್ದೇವೆ. ಭಾಗ್ಯಶ್ರೀ ನಮ್ಮೂರಿನ ಕೀರ್ತಿ ಹೆಚ್ಚಿಸಲಿ, ಈಕೆಯ ಸಾಧನೆ ಊರಿನ ಜನರು ಹೆಮ್ಮೆ ಪಡುವಂತೆ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರವೇ ಗ್ರಾಮ ಘಟಕದ ಅಧ್ಯಕ್ಷ ಕಿರಣ್ ನಾಯಕ, ಉಪಾಧ್ಯಕ್ಷ ಗಫೂರ್, ಸಹಕಾರ್ಯದರ್ಶಿ ಸದ್ದಾಮ್, ಮುಖಂಡರಾದ ಪ್ರದೀಪ್, ದಾದಾವಲಿ, ಅಮರೇಶ, ವಸಂತ, ಎಂಡಿ ರಫಿ ಗ್ರಾಮಸ್ಥರಾರ ಶರಣಪ್ಪ ಸಾಲಿ, ಚನ್ನಬಸವ, ಕರ್ನಟಗಿ, ರವಿ ಗುತ್ತೇದಾರ್, ಪ್ರಕಾಶ ಗುತ್ತೇದಾರ್, ಇಬ್ರಾಹಿಂ ಜಂಡಾಕಟ್ಟಿ ಸೇರಿದಂತೆ ಅನೇಕರಿದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..

Wednesday, July 15, 2020

ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಪಡೆದ 'ಜನನಿ'ಯ ಸಾಧನೆಗೆ ಮೆಚ್ಚುಗೆ


ದೊರೆ ನ್ಯೂಸ್ ಕನ್ನಡ, ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಹಾಲಾಪೂರ ಗ್ರಾಮದಲ್ಲಿರುವ ಜನನಿ ಪದವಿ ಪೂರ್ವ ಕಾಲೇಜು ಈ ವರ್ಷದ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಪಡೆದಿದ್ದು, ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕ ವರ್ಗ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಲಾ ವಿಭಾಗದಲ್ಲಿ ಕುಶಾ ರಾಠೋಡ್ ತಂದೆ ಜಗನ್ನಾಥ ರಾಠೋಡ್ 529 ಅಂಕಗಳನ್ನು ಪಡೆಯುವ ಮೂಲಕ ಶೇ. 88.16% ಫಲಿತಾಂಶ ಪಡೆದುಕೊಂಡಿದ್ದಾನೆ. ವಾಣಿಜ್ಯ ವಿಭಾಗದಲ್ಲಿ ಸುಜಾತ ತಂದೆ ಬಸವರಾಜ ಹಾಲಾಪೂರ 512 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಶೇ. 85.33% ಫಲಿತಾಂಶ ಪಡೆದುಕೊಂಡಿದ್ದಾಳೆ.
ಈ ವರ್ಷ ಕಾಲೇಜಿನ ಒಟ್ಟು 60 ವಿದ್ಯಾರ್ಥಿಗಳು ದ್ವೀತಿಯ ಪಿಯು ಪರೀಕ್ಷೆ ಬರೆದಿದ್ದು, 07 ವಿದ್ಯಾರ್ಥಿಗಳು ಡಿಸ್ಟಿಂಕ್ಸನ್, 31 ವಿದ್ಯಾರ್ಥಿಗಳು ಪ್ರಥಮ, 04 ವಿದ್ಯಾರ್ಥಿಗಳು ದ್ವೀತಿಯ, 09 ವಿದ್ಯಾರ್ಥಿಗಳು ತೃತೀಯ ಸ್ಥಾನದಲ್ಲಿ ಪಾಸ್ ಆಗಿದ್ದಾರೆ. ಇದರೊಂದಿಗೆ ಕಾಲೇಜಿನ ಫಲಿತಾಂಶ ಶೇ. 85% ಇದ್ದು, ಉತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸುವುದಾಗಿ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕ ವರ್ಗ ತಿಳಿಸಿದೆ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..

ಬಿಜೆಪಿ ಎಸ್ಟಿ ಮೋರ್ಚಾದ ನೂತನ ಅಧ್ಯಕ್ಷರಿಗೆ ಮುಖಂಡರಿಂದ ಸನ್ಮಾನ

ನಾಗರಾಜ್ ತಳವಾರ ನವಲಿಯವರಿಗೆ
ಸನ್ಮಾಸಿದ ಬಿಜೆಪಿ ಮುಖಂಡರು
ದೊರೆ ನ್ಯೂಸ್ ಕನ್ನಡ, ಕೊಪ್ಪಳ: ಭಾರತೀಯ ಜನತಾ ಪಕ್ಷ (ಬಿಜೆಪಿ)ಯ ಕೊಪ್ಪಳ ಜಿಲ್ಲಾ ಎಸ್ಟಿ ಮೋರ್ಚಾದ ನೂತನ ಕೋಶಾಧ್ಯಕ್ಷ ಹಾಗೂ ಖಜಾಂಚಿಯಾಗಿ ಆಯ್ಕೆಯಾಗಿರುವ ನಾಗರಾಜ್ ತಳವಾರ ನವಲಿಯವರನ್ನು ಜಿಲ್ಲೆಯ ಬಿಜೆಪಿ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಕನಕಗಿರಿ ಮಂಡಲದ ಪ್ರಧಾನ ಕಾರ್ಯದರ್ಶಿ ವಿರುಪಣ್ಣ ಕಲ್ಲೂರು, ವಿಎಸ್ಎಸ್ಎನ್ ನವಲಿ ಅಧ್ಯಕ್ಷ ಭೀಮನಗೌಡ ಹರ್ಲಾಪುರ, ಯುವ ಮುಖಂಡರಾದ ವೆಂಕಟೇಶ್ ಸಂಕನಾಳ, ಗಾದೆಪ್ಪ ಉದ್ದಿಹಾಳ, ಹುಸೇನಪ್ಪ ನಾಯಕ ಈಚನಾಳ,  ಬೀರಪ್ಪ ಚನ್ನಳ್ಳಿ, ಹನುಮೇಶ ನಾಯಕ ಗಂಗಾವತಿ, ಮಲ್ಲು, ವೆಂಕಟೇಶ ಪೂಜಾರಿ, ದೇವರಾಜ ತಳವಾರ ಕಲ್ಗುಡಿ ಸೇರಿದಂತೆ ಅನೇಕರಿದ್ದರು.

Saturday, July 11, 2020

ಮಸ್ಕಿ: ತಾಲೂಕು ಪಂಚಾಯ್ತಿ ಅಧ್ಯಕ್ಷರಿಗೆ ಅಂಜನ್ ಸೇನಾ ಸಮಿತಿಯಿಂದ ಸನ್ಮಾನ

ದೊರೆ ನ್ಯೂಸ್ ಕನ್ನಡ ರಾಯಚೂರು (ಜು.11): ಜಿಲ್ಲೆಯ ಮಸ್ಕಿ ತಾಲೂಕು ಪಂಚಾಯ್ತಿಯ ಅಧ್ಯಕ್ಷರಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ನೂತನ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪುರ ಅವರನ್ನು ರೂರಲ್ ಅಂಜನ್ ಸೇನಾ ಸಮಿತಿಯ ಮಸ್ಕಿ ತಾಲೂಕ ಘಟಕದ ಮುಖಂಡರು ಸನ್ಮಾನಿಸಿ ಗೌರವಿಸಿದ್ದಾರೆ.
ಶನಿವಾರ ಮಸ್ಕಿಯ ತಾಲೂಕು ಪಂಚಾಯ್ತಿ ಕಾರ್ಯಾಲಯಕ್ಕೆ ಆಗಮಿಸಿದ ಅಧ್ಯಕ್ಷ ಶಿವಣ್ಣ ನಾಯಕ ವೆಂಕಟಾಪುರ ಅವರಿಗೆ ಶ್ಯಾಲು, ಹಾರ ಹಾಕಿ ಸನ್ಮಾನಿಸಿದ ರೂರಲ್ ಅಂಜನ್ ಸೇನಾ ಸಮಿತಿಯ ಮುಖಂಡರು ಶಿವಣ್ಣನವರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗ್ವಾಲಪ್ಪ ನಾಯಕ ಉಸ್ಕಿಹಾಳ, ವೆಂಕಟೇಶ ನಾಯಕ ನಂಜಲದಿನ್ನಿ, ವೆಂಕಟೇಶ ನಾಯಕ ಉಸ್ಕಿಹಾಳ, ಹೀರೆನಾಯಕ ಸುಭೇದರ, ರಾಜ ಹೇಮಂತ್ ಕುಮಾರ್, ಮಾರುತೇಶ ನಾಯಕ ಬುನ್ನಟ್ಟಿ, ಯಂಕೋಬ ನಾಯಕ ಬುನ್ನಟ್ಟಿ, ಸಂತೋಷ ನಾಯಕ ಬುನ್ನಟ್ಟಿ ಸೇರಿದಂತೆ ಅನೇಕರಿದ್ದರು.

Friday, July 10, 2020

ಡಿ.ಜಿ ಗುರಿಕಾರ್ ಗೆ ಭಗವಾನ್ ಬುದ್ಧ ಫೆಲೋಷಿಪ್ ನ್ಯಾಷನಲ್ ಅವಾರ್ಡ್ - 2019

ದೊರೆ ನ್ಯೂಸ್ ಕನ್ನಡ ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಆನೆಹೊಸೂರು ಗ್ರಾಮದ ದುರುಗಪ್ಪ ಗುರಿಕಾರ್ (ಡಿ.ಜಿ ಗುರಿಕಾರ್) ರವರಿಗೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ 'ಭಗವಾನ್ ಬುದ್ಧ ಫೆಲೋಷಿಪ್ ನ್ಯಾಷನಲ್ ಅವಾರ್ಡ್ - 2019' ಲಭಿಸಿದೆ. 
ಡಿ.ಜಿ ಗುರಿಕಾರ್ ರವರ ಸಮಾಜ ಸೇವೆಯನ್ನು ಗುರುತಿಸಿ, ಪ್ರತಿಷ್ಠಿತ ಅವಾರ್ಡ್ ನೀಡಲಾಗಿದ್ದು, ಕೊರೊನಾ ವೈರಸ್ ಕಾರಣದಿಂದ ಲಾಕ್ ಡೌನ್ ಉಂಟಾದ ಹಿನ್ನೆಲೆಯಲ್ಲಿ ಅವಾರ್ಡ್ ಅನ್ನು ಅಂಚೆ ಮೂಲಕ ಗುರಿಕಾರ್ ರವರ ಮನೆಗೆ ತಲುಪಿಸಲಾಗಿದೆ.
ಆನೆಹೊಸೂರು ಗ್ರಾಮದ ಡಿ.ಜಿ ಗುರಿಕಾರ್ (ದುರುಗಪ್ಪ ಗುರಿಕಾರ್), ಸಮಾಜ ಸೇವೆಯ ಮೂಲಕ ರಾಯಚೂರು ಜಿಲ್ಲೆಯಾದ್ಯಂತ ಗುರುತಿಸಿಕೊಂಡಿದ್ದಾರೆ. ದಲಿತ ಸಮುದಾಯಗಳ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುವ ಗುರಿಕಾರ್ ಆ ಸಮುದಾಯಗಳನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 
ಹಿಂದುಳಿದ, ದಲಿತ ವರ್ಗಗಳ ಬಗ್ಗೆ ಡಿ.ಜಿ ಗುರಿಕಾರ್ ರವರಿಗೆ ಇರುವ ಕಾಳಜಿಯನ್ನು ಗುರುತಿಸಿದ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಅವರನ್ನು ಪ್ರತಿಷ್ಠಿತ 'ಭಗವಾನ್ ಬುದ್ಧ ಫೆಲೋಷಿಪ್ ನ್ಯಾಷನಲ್ ಅವಾರ್ಡ್ - 2019'ಕ್ಕೆ ಆಯ್ಕೆ ಮಾಡಿ, ಅವರ ಮನೆಗೆ ಅವಾರ್ಡ್ ಅನ್ನು ತಲುಪಿದೆ.
ಗುರಿಕಾರ್ ರವರಿಗೆ ನ್ಯಾಷನಲ್ ಅವಾರ್ಡ್ ದೊರೆತಿರುವ ವಿಷಯ ತಿಳಿದ ಅವರ ಅಭಿಮಾನಿಗಳು, ವಿವಿಧ ಸಮುದಾಯದ ಮುಖಂಡರು ಅವರನ್ನು ಅಭಿನಂದಿಸಿದ್ದಾರೆ. ಅಲ್ಲದೇ ಲಿಂಗಸುಗೂರಿನ ವಾಲ್ಮೀಕಿ ನಾಯಕ ಸಮುದಾಯದ ಯುವಕರು ಮುಂದಿನ ದಿನಗಳಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.