Monday, July 20, 2020

ತಾ.ಪಂ ಅಧ್ಯಕ್ಷ, ಬಿಜೆಪಿ ನಾಯಕರಿಗೆ ಯುವ ಮುಖಂಡರಿಂದ ಸನ್ಮಾನ


ದೊರೆ ನ್ಯೂಸ್ ಕನ್ನಡ, ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕು ಪಂಚಾಯ್ತಿಗೆ ನೂತನ ಅಧ್ಯಕ್ಷರಾಗಿ ಇತ್ತಿಚೆಗೆ ಆಯ್ಕೆಯಾದ ಶಿವಣ್ಣ ನಾಯಕ ವೆಂಕಟಾಪುರ ಹಾಗೂ ಬಿಜೆಪಿಯ ಯುವ ನಾಯಕ ಆರ್ ಸಿದ್ದನಗೌಡ ತುರವಿಹಾಳರವರನ್ನು ತಾಲೂಕಿನ ವಾಲ್ಮೀಕಿ ನಾಯಕ ಸಮಾಜದ ಯುವಕರು ಸನ್ಮಾನಿಸಿ ಗೌರವಿಸಿದರು.
ತಾಲೂಕಿನ ಜಿನ್ನಾಪುರ, ಹಾಲಾಪೂರ ಗ್ರಾಮಗಳಿಗೆ ಭೇಟಿ ನೀಡಿದ ಶಿವಣ್ಣ ನಾಯಕ, ಆರ್. ಸಿದ್ದನಗೌಡ ತುರವಿಹಾಳರವರನ್ನು ಎರಡು ಗ್ರಾಮಗಳ ವಾಲ್ಮೀಕಿ ನಾಯಕ ಸಮಾಜದ ಯುವಕರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ರಾಜ ಹೇಮಂತ್ ಕುಮಾರ್ ಜಿನ್ನಾಪುರ, ಹಿರೇನಾಯಕ ಸುಬೇದಾರ್ ಜಿನ್ನಾಪುರ, ಬಸವರಾಜ್ ತಡಕಲ್, ಬಸನಗೌಡ ಅಗದಾಳ, ಸೋಮನಾಥ ಪೊಲೀಸ್ ಪಾಟೀಲ್, ದೇವಣ್ಣ ಪೊಲೀಸ್ ಪಾಟೀಲ್, ಮರಿಸ್ವಾಮಿ ಯದ್ದಲದಿನ್ನಿ, ವಿಜಯಕುಮಾರ್ ನಾಯಕ ಹಣಿಗಿ, ಸೋಮನಗೌಡ ಮಾಲಿ ಪಾಟೀಲ್, ಸೋಮಣ್ಣ ಪೊಲೀಸ್ ಪಾಟೀಲ್ ಸೇರಿದಂತೆ ಅನೇಕರಿದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: ( dorenewskannada@gmail.com ) ಹಾಗೂ ದೊರೆ ನ್ಯೂಸ್ ಕನ್ನಡ ವೆಬ್ ಸೈಟ್ (ಬ್ಲಾಗ್), ಫೇಸ್ಬುಕ್ ಖಾತೆ, ಫೇಸ್ಬುಕ್ ಪೇಜ್, ಫೇಸ್ಬುಕ್ ಗ್ರುಪ್, ಯೂಟ್ಯೂಬ್ ಚ್ಯಾನಲ್ ಗಳನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಕಿರು ಪ್ರಯತ್ನಕ್ಕೆ ಸಹಕರಿಸಿ ಮಿತ್ರರೇ..

No comments:

Post a Comment