Wednesday, February 15, 2023

ಡಬಲ್ ಇಂಜಿನ್ ಸರ್ಕಾರದ ಕಿವಿ ಹಿಂಡಿದ ಶಾಸಕ ಬಂಡೆಪ್ಪ ಖಾಶೆಂಪುರ್

Bidar South MLA Bandeppa Khashempur

ಬೀದರ್ (ಫೆ.15): ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯವ್ರು ನಮ್ಮದು ಡಬಲ್ ಇಂಜಿನ್ ಸರ್ಕಾರ ಎಂದು ಮಾತಿಗೆ ನೂರು ಬಾರಿ ಹೇಳ್ತಾರೆ ಅವರು ರಾಜ್ಯದ ಜನತೆಗಾಗಿ ಏನು ಒಳಿತು ಮಾಡಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸದನದಲ್ಲಿಯೇ ಡಬಲ್ ಇಂಜಿನ್ ಸರ್ಕಾರದ ಕಿವಿ ಹಿಂಡಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ನಡೆದ ಬಜೆಟ್ ಅಧಿವೇಶನದ ನಾಲ್ಕನೇ ದಿನದ ಕಲಾಪದಲ್ಲಿ ಪಾಲ್ಗೊಂಡು, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತುತ ಯಾವ ರೀತಿಯ ಯೋಜನೆಗಳಿವೆ ಎಂಬುದನ್ನು ತಿಳಿಸಲಾಗಿದೆ. ಆದರೇ ಮುಂದೆ ಏನು ಮಾಡುತ್ತೇವೆ ಎಂಬುದರ ಬಗ್ಗೆ ಹೇಳಿಲ್ಲ ಎನ್ನುವ ಮೂಲಕ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ವಿರುದ್ಧ ತಮ್ಮ ಭಾಷಣದೂದ್ದಕ್ಕೂ ಆಕ್ರೋಶ ವ್ಯಕ್ತಪಡಿಸಿದರು.

ಸದನದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರದ ವಿರುದ್ಧ ನಡೆಸಿದ ವಾಗ್ದಾಳಿ ವಿಡಿಯೋ...

ಸಿಟಿ ರವಿಗೆ ಅಧಿಕಾರದ ಮದವೇ:

ಅಧಿಕಾರದ ಮದದಲ್ಲಿ ಸಿಟಿ ರವಿಯವರು ಜೆಡಿಎಸ್ ಬಗ್ಗೆ ಕೆಟ್ಟದ್ದಾಗಿ ಮಾತನ್ನಾಡಿದ್ದಾರೆ. ಅವರಿಗೆ ಸರ್ಕಾರ ಮಾಡುವ ಭರಾಟೆನೊ ಏನೋ, ನಮ್ಮ ಪಕ್ಷವನ್ನು ಅಂಗವಿಕಲರಿಗೆ ಒಲಿಕೆ ಮಾಡಿದ್ದಾರೆ. ವಿಶ್ವದಲ್ಲಿರುವ ಅಂಗವಿಕಲರಿಗೆ ಬಹಳಷ್ಟು ನೋವಾಗಿದೆ. ಅಂಗವಿಕಲತೆ ಎಂಬುದನು ಶಾಪವಲ್ಲ. ಅದು ದೇವರು ನೀಡಿದ ವರಧಾನವಾಗಿದೆ ಎಂದರು.


ನೀತಿ ಸಂಹಿತೆ ಬರುವವರೆಗೂ ಮಾತ್ರ ನಿಮ್ಮ ಆಟ:

ಬಿಜೆಪಿಯ ದೊಡ್ಡದೊಡ್ಡ ನಾಯಕರು ಭಾಷಣ ಮಾಡುತ್ತಿದ್ದಾರೆ. ನಿಮ್ಮ ಆಟ ನೀತಿ ಸಂಹಿತೆ ಜಾರಿಗೆ ಬರುವವರೆಗೂ ಮಾತ್ರ. ಆ ನಂತರ ನಿಮ್ಮ ಆಟ ನಡೆಯಲ್ಲ. ಅಲ್ಲಿಯವರೆಗಾದರೂ ಜನತೆಗೆ ಒಳಿತಾಗುವ ಕೆಲಸ ಮಾಡಿ ಎಂದು ಬಿಜೆಪಿಗೆ ಕಿವಿ ಮಾತು ಹೇಳಿದರು.


ಬೀದರ್ ಪಿಡಿಒ ಉದಾಹರಣೆ ನೀಡಿದ ಖಾಶೆಂಪುರ್:

ಅಂಗವೀಕಲರು ನಮಗಿಂತ ಬುದ್ಧಿವಂತರೂ ಇರುತ್ತಾರೆ. ನಮ್ಮಲ್ಲಿ ಒಬ್ಬ ಪಿಡಿಒ ಇದ್ದಾನೆ. ಆತನಿಗೆ ಕಣ್ಣಿಲ್ಲ. ಆದರೇ ಅವನಷ್ಟು ನಾವ್ಯಾರು ಚನ್ನಾಗಿ ಕೆಲಸ ಮಾಡಲಾಗುವುದಿಲ್ಲ. ಅಂತವರ ಮೇಲೆ ಯಾವುದೋ ಉದಾಹರಣೆ ನೀಡುವುದು ಎಷ್ಟು ಸರಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಆಕ್ರೋಶ ವ್ಯಕ್ತಪಡಿಸಿದರು.


ಡಿಜೆಲ್ ಇಲ್ಲದ ಡಬಲ್ ಇಂಜಿನ್:

ಸಿಟಿ ರವಿಯವರು ಡಬಲ್ ಇಂಜಿನ್ ಎಂಬ ಪದವನ್ನು ನೂರಾರು ಬಾರಿ ಬಳಸಿದ್ದಾರೆ. ಈ ಡಬಲ್ ಇಂಜಿನ್ ಓಡುವ ಇಂಜಿನ್ ನಾ ಅಥವಾ ದಿಲ್ಲಿಯಲ್ಲಿನ ರೈಲ್ವೆ ಭವನದ ಬಳಿ ನಿಲ್ಲಿಸಲಾದ   ರೀತಿಯ ಓಡದ ಇಂಜಿನ್ ಆ.? ಆ ಇಂಜಿನ್ ನಲ್ಲಿ ಒಳಗಡೆ ಡಿಸೇಲ್ ಇಲ್ಲ. ಅದರಂತೆ ಈ ಡಬಲ್ ಇಂಜಿನ್ ಸರ್ಕಾರದಲ್ಲೂ ಡಿಸೆಲ್ ಇಲ್ವಾ ಎಂದು ಶಾಸಕರು ಪ್ರಶ್ನಿಸಿದರು.

ದೇಶದಲ್ಲಿ ಶೇಕಡ 70% ರಷ್ಟು ಜನ ರೈತರಿದ್ದಾರೆ. ಈ ಸರ್ಕಾರ ರೈತರಿಗೆ ಏನು ಮಾಡಿದೆ. ಕುಮಾರಸ್ವಾಮಿಯವರ ಸರ್ಕಾರ 24 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿ ರೈತರಿಗೆ ಶಕ್ತಿ ನೀಡಿತ್ತು. ನಾವು ಸಾಲಮನ್ನಾ ಮಾಡಿದಷ್ಟು  ಈ ಸರ್ಕಾರದಲ್ಲಿ ಸಾಲ ಕೊಡಲಾಗ್ತಿಲ್ಲ. ರೈತರ ಆದಾಯ ಡಬಲ್ ಮಾಡಿದ್ದಿರಾ.? ಹೋಗಿ ರೈತರನ್ನು ಕೇಳಿ ಅವರ ಆದಾಯ ಡಬಲ್ ಆಗಿದೆಯಾ ಅಂತ. ರೈತರಿಗೆ ಬೆಳೆ ನಷ್ಟದ ಪರಿಹಾರವನ್ನು ಇವ್ರು ಸರಿಯಾಗಿ ಕೊಟ್ಟಿಲ್ಲ. ನೆಟೆ ರೋಗದಿಂದ ಕಲ್ಯಾಣ ಕರ್ನಾಟಕ ಭಾಗದ ರೈತರ 90% ತೊಗರಿ ಬೆಳೆ ಹಾನಿಯಾಗಿದೆ. ಸರ್ಕಾರ ನೀಡಿರುವ ಪರಿಹಾರ ಸೂಕ್ತವಾಗಿದೆಯಾ? ಡಬಜ್ ಇಂಜಿನ್ ಅಂದ್ರೆ ಇದೇನಾ.

ಜಿಲ್ಲೆಗೊಂದು ಗೋ ಶಾಲೆ ಮಾಡುತ್ತಿವಿ ಎಂದಿದ್ದರು. ನಿಮ್ಮ ಬಜೆಟ್ ನಲ್ಲಿ ಹೇಳಿದ ಯೋಜನೆ ಕಾರ್ಯರೂಪಕ್ಕೆ ಬಂದಿದೆಯಾ? ಜೆಜೆಎಮ್ ಯೋಜನೆಯ ಕಥೆ ಏನಾಗಿದೆ. ಕ್ಷೇತ್ರಕ್ಕೆ ಒಂದೇ ಒಂದು ಸ್ವಯಂ ಉದ್ಯೋಗ ನೀಡ್ತಿದ್ದಿರಿ. ನಾವು ಜನರಿಗೆ ಏನು ಹೇಳ್ಬೇಕು. ಎಸ್ಸಿ, ಎಸ್ಟಿ ಜನರಿಗೆ ಹೇಗೆ ನ್ಯಾಯ ಕೊಡಲು ಸಾಧ್ಯವಾಗುತ್ತದೆ. ಎಲ್ಲಾ ನಿಗಮಗಳಲ್ಲಿ ಇದೇ ಪರಿಸ್ಥಿತಿ ಇದೆ. ಸುಮ್ನೆ ಯಾಕೆ ನಮ್ಮನ್ನ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ಮಾಡ್ತಿದ್ದಿರಿ.

ನೀರುದ್ಯೋಗ ನಿವಾರಣೆಯಲ್ಲಿ ಮೇಲಿನ ಇಂಜಿನ್ ಮತ್ತು ಕೆಳಗಿನ ಇಂಜಿನ್ ಗಳು ಫೇಲ್ ಆಗಿವೆ. ವರ್ಷಕ್ಕೆ 2 ಕೋಟಿ ಜನರಿಗೆ ನೌಕರಿ ನೀಡ್ತಿವಿ ಅಂತ ಮೇಲಿನ ಇಂಜಿನ್ ಪ್ರಣಾಳಿಕೆಯಲ್ಲಿ ಹೇಳಿತ್ತು. ಅದು ಆಗ್ಲಿಲ್ಲ. ನೀವು ಏನ್ ಮಾಡಿದ್ದಿರಾ ಹೇಳಿ. ಬೆಳಕು ಯೋಜನೆ ಕಥೆ ಏನಾಯ್ತು. ನನ್ನ ಕ್ಷೇತ್ರಕ್ಕೆ  ಈ ಸರ್ಕಾರ ಮೂರುವರೆ ವರ್ಷದಲ್ಲಿ ಕೇವಲ 800 ಮನೆಗಳನ್ನು ನೀಡಿದೆ. ಪಕ್ಕದ ತೆಲಗಾಂಣದಲ್ಲಿ ಸಿಂಗಲ್ ಇಂಜಿನ್ ಸರ್ಕಾರವಿದೆ. ಅವರು ರೈತರಿಗೆ ಎಕರೆಗೆ 10 ಸಾವಿರ ರೂ. ಬಿತ್ತನೆಯ ಖರ್ಚು ವೆಚ್ಚಕ್ಕಾಗಿ ನೀಡ್ತಿದ್ದಾರೆ. ನೀವು ಏನ್ ಮಾಡ್ತಿದ್ದಿರಿ. ಈ ಹಿಂದೆ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದಾಗ ರಾಜ್ಯದ ನೀರಾವರಿಗೆ ಬಹಳಷ್ಟು ಅನುದಾನ ನೀಡಿದ್ದಾರೆ. ಈ ಸರ್ಕಾರ ಏನ್ ಮಾಡ್ತಿದೆ ಎಂದು ಖಾಶೆಂಪುರ್ ಪ್ರಶ್ನಿಸಿದರು.


ಮೀಸಲಾತಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ:

ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಿರುವುದು ಸಂತಸದ ವಿಷಯವಾಗಿದೆ. ನಾವು ಅದನ್ನು ಸ್ವಾಗತಿಸುತ್ತೇವೆ. ಬೀದರ್, ಗುಲ್ಬರ್ಗಾ, ಯಾದಗಿರಿಯಲ್ಲಿ ಗೊಂಡ, ಟೋಕರಿ ಕೋಳಿ ಎರಡು ಜಾತಿಗಳು ಎಸ್ಟಿಯಲ್ಲಿ ಬರುತ್ತದೆ. ಗೊಂಡ ಕುರುಬ, ಕುರುಬ ಗೊಂಡ, ಟೋಕರಿ ಕೋಳಿ ಮತ್ತು ಕೋಳಿ ಇವು ಎರಡು ಒಂದೇ ಎಂದು ಈ ಹಿಂದಿನ ಸರ್ಕಾರ ಕೇಂದ್ರಕ್ಕೆ ವರದಿ ಕಳಿಸಿದೆ. ನಿಮ್ಮ ಡಬಲ್ ಇಂಜಿನ್ ಸರ್ಕಾರದಿಂದ ಈ ಎರಡು ಒಂದೇ ಎಂದು ಡಿಕ್ಲರ್ ಮಾಡಿಸಿ. ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸಿ ಎಂದು ಕುರುಬ ಸಮಾಜದ ಜಗದ್ಗುರುಗಳು ಬೆಂಗಳೂರಿನ ತನಕ ಹೋರಾಟ ಮಾಡಿದ್ದಾರೆ ಅದನ್ನು ಮಾಡ್ಸಿ ಕೊಡಿ ಎಂದರು.


ಬೀದರ್ ಸುಗರ್ ಪ್ಯಾಕ್ಟರಿ ಪುನಃ ಪ್ರಾರಂಭಿಸಿ:

ಬೀದರ್ ಸುಗರ್ ಪ್ಯಾಕ್ಟರಿಗೆ ನಾನು 20 ಕೋಟಿ ರೂ. ಗ್ರ್ಯಾಂಟ್ ಕೊಡ್ಸಿದ್ದೆ. ಪ್ಯಾಕ್ಟರಿ ಚಾಲೂ ಆಗಿತ್ತು. ಬಳಿಕ ಬಂದ್ ಆಗಿದೆ. ಅದಕ್ಕೆ ಈಗ ಅಧ್ಯಕ್ಷರು, ಉಪಾಧ್ಯಕ್ಷರು ಎಲ್ಲರೂ ನಿಮ್ಮ ಪಕ್ಷದವರೇ ಇದ್ದಾರೆ. ಇದಾಗಿಯೂ ಅದನ್ನು ಬಂದ್ ಮಾಡಲಾಗಿದೆ. ಅದನ್ನು ಪುನಃ ಚಾಲೂ ಮಾಡ್ಸಿ. ಕೆಕೆಆರ್ಡಿಬಿ ಅನುದಾನದಲ್ಲಿ ಶಿಕ್ಷಣ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಬೇಕಾಗಿದೆ. ನಮ್ಮ ಭಾಗಕ್ಕೆ ಇಷ್ಟೆ ಅಂತ ಅನುದಾನ ನಿಗಧಿ ಮಾಡಬೇಡಿ. ಬೀದರ್ ಗೆ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ನೀಡಿ. ಬಂದ್ ಆಗಿರುವ ಕ್ಯಾತ್ ಲ್ಯಾಬ್ ಪುನಃ ಚಾಲೂ ಮಾಡ್ಸಿ. ಅಲ್ಲಿ ಸಾಕಷ್ಟು ಅನುದಾನವಿದೆ. ಅದನ್ನು ಸದ್ಬಳಕೆ ಮಾಡ್ಸಿ. ಬೀದರ್ ನಲ್ಲಿರುವ ಚಿಟಗುಪ್ಪಾ ತಾಲೂಕಿಗೆ ಸೌಕರ್ಯಗಳನ್ನು ಒದಗಿಸಿಕೊಡಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸುದೀಘ್ರ ಭಾಷಣದಲ್ಲಿ ಸರ್ಕಾರಕ್ಕೆ ಮನವಿ ಮಾಡಿದರು.

No comments:

Post a Comment