Thursday, January 30, 2020

ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ: ಎನ್.ರಘುವೀರ ನಾಯಕ


ದೊರೆ ನ್ಯೂಸ್ ಕನ್ನಡ (ರಾಯಚೂರು, ಜ.30): ರಾಯಚೂರು ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿಯಮ ಉಲ್ಲಂಘಿಸಿ ಸರಕು ಸಾಗಣೆ ವಾಹನ ಫಲಾನುಭವಿಗಳನ್ನು ಅಯ್ಕೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕೆಂದು ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್.ರಘುವೀರ ನಾಯಕ ಒತ್ತಾಯಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿರುವ ಜಿ.ಕುಮಾರ್ ನಾಯಕ ರಾಯಚೂರು ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಮನವಿ ಸಲ್ಲಿಸಿದ ರಘುವೀರ ನಾಯಕ, ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸಹಾಯಧನದಲ್ಲಿ ನೀಡುವ ಸರಕು ಸಾಗಣೆ ವಾಹನ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುತ್ತಿರುವದನ್ನು ತಕ್ಷಣ ಕೈಬಿಡಬೇಕು. ಲಾಟರಿ ಅಂದರೆ ಸಿಕ್ಕವರಿಗೆ ಮುಕ್ಕಣ್ಣ ಅನ್ನುವಂತಾಗುತ್ತದೆ. ಇದರಿಂದ ವಯೋಮಾನ ಮೀರುತ್ತಿರುವ ನೈಜ ಫಲಾನುಭವಿಗಳಿಗೆ ಅನ್ಯಾಯಾವಾಗುತ್ತಿದೆ. ಈ ಕುರಿತು  ಅಪರ ಜಿಲ್ಲಾಧಿಕಾರಿಗಳು ರಾಯಚೂರು ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ರಾಯಚೂರುರವರಿಗೆ ಮನವಿ ಸಲ್ಲಿಸಿದರು ಯಾವುದೇ ಕ್ರಮ ಜರುಗಿಸದೆ ಏಕ ಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ.
ಪ್ರವಾಸೋದ್ಯಮ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿ ವಯಸ್ಸು, ವಿದ್ಯಾಬ್ಯಾಸ ಮತ್ತು ಅನುಭವ ಈ ಎಲ್ಲಾ ಮಾನದಂಡಗಳ ಆಧಾರದ ಮೇಲೆ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ. ಆದರೆ ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಈ ಎಲ್ಲಾ ಮಾನದಂಡಗಳನ್ನು ಗಾಳಿಗೆ ತೂರಿ ಕೇವಲ ಲಾಟರಿ ಮೂಲಕ ಆಯ್ಕೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಇಲ್ಲಿಯ ತನಕ ಇದೇ ಇಲಾಖೆಯಿಂದ ಅನೇಕ ಯೋಜನೆಗಳ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಲಾಟರಿ ಮೂಲಕ ಮಾಡಿಲ್ಲ. ಯಾವುದೇ ಯೋಜನೆಗೆ ಅರ್ಜಿ ಕರೆದಾಗ ನೂರಾರು ಅರ್ಜಿ ಬರುವುದು ಸಹಜ. ಅದರಲ್ಲಿ ಅರ್ಹತೆಯನ್ನು ಪರಿಗಣಿಸಬೇಕೆ ವಿನ: ಲಾಟರಿ ಅಲ್ಲ. ವಯೋಮಾನ ಮತ್ತು ವಿದ್ಯಾರ್ಹತೆ ಪರಿಗಣಿಸಬೇಕು. 
ಲಾಟರಿ ಮೂಲಕ ಆಯ್ಕೆಯಾದ ಫಲಾನುಭವಿಗಳನ್ನು ಬಿಟ್ಟು  ಕಾಯ್ದಿರಿಸಿದ ಪಟ್ಟಿ ತಯಾರಿಸಿ ಮುಂದೆ ಟಾರ್ಗೇಟ ಬಂದಾಗ ಈ ಕಾಯ್ದಿರಿಸಿದ ಫಲಾನುಭವಿಗಳಿಗೆ ಸೌಲಭ್ಯ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಿದ್ದಾರೆ. ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿಗಳು  ಮುಂದಿನ ವರ್ಷ ಅರ್ಜಿ ಕರೆದಾಗ ಪುನಹ ಹೊಸದಾಗಿ ನೂರಾರು ಜನ ಅರ್ಜಿದಾರರು ಅರ್ಜಿ ಹಾಕುತ್ತಾರೆ ಎಂಬುದನ್ನು ಅರಿತುಕೊಳ್ಳಬೇಕು. ಅವರನ್ನು ಯಾವ ರೀತಿ ಆಯ್ಕೆ ಮಾಡುತ್ತಾರೆ ಮತ್ತು ಕಾಯ್ದಿರಿಸಿದ ಪಟ್ಟಿಯನ್ನು ಏನು ಮಾಡುತ್ತಾರೆ? ಜೊತೆಗೆ  ಕಾಯ್ದಿರಿಸಿದ ಪಟ್ಟಿಯಲ್ಲಿರುವ ಫಲಾನುಭವಿಗಳಿಗೆ ಸೌಲಭ್ಯ ನೀಡಬೇಕು ಎಂದು ಸರಕಾರದ ಸುತ್ತೋಲೆಯಲ್ಲಿ ಇಲ್ಲ. ಅದ್ದರಿಂದ ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸಹಾಯಧನದಲ್ಲಿ ನೀಡುವ ಸರಕು ಸಾಗಣೆ ವಾಹನ ಫಲಾನುಭವಿಗಳನ್ನು ಲಾಟರಿ ಪ್ರಕ್ರಿಯೆಯನ್ನು ಬಿಟ್ಟು ವಯೋಮಾನದ ಆಧಾರದ ಮೇಲೆ ಆಯ್ಕೆ ಮಾಡಬೇಕು ಮತ್ತು ನಿಯಮ ಉಲ್ಲಂಘಿಸಿ ಆಯ್ಕೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ರಘುವೀರ ನಾಯಕ, ಕುಮಾರ್ ನಾಯಕರಿಗೆ  ಮನವಿಯ ಮೂಲಕ ಒತ್ತಾಯಿಸಿದರು. 
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಯಕ, ಮುಖಂಡರಾದ ರಮೇಶ ನಾಯಕ, ವಿರುಪಾಕ್ಷಿ ನಾಯಕ, ವೀರೇಶ ನಾಯಕ, ಹನುಮಂತ ನಾಯಕ, ರಂಗನಾಥ ನಾಯಕ ಸೇರಿದಂತೆ ಅನೇಕರಿದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Tuesday, January 28, 2020

ಪಾಮನಕಲ್ಲೂರು: ನಿಜ ಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ, ಸ್ವಯಂ ಪ್ರೇರಿತ ರಕ್ತದಾನ ಶಿಬಿರ


ದೊರೆ ನ್ಯೂಸ್ ಕನ್ನಡ (ಪಾಮನಕಲ್ಲೂರು ಜ.28): ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತೋತ್ಸವ ಮತ್ತು ಸಮುದಾಯ ಭವನ ಉದ್ಘಾಟನಾ ಸಮಾರಂಭ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. 
ಗ್ರಾಮದ ಹಳ್ಳಿಕಟ್ಟಿಯಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ಗಂಗಾಮತ ಸಮಾಜದ ಸ್ವಾಮೀಜಿ ಮಲ್ಲಿಕಾರ್ಜುನ ಶ್ರೀಗಳು, ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್, ಪತ್ರಕರ್ತ ಅಮರೇಶ್ ಕಲ್ಲೂರು, ಮುಖಂಡರಾದ ಕೆ ಶಾಂತಪ್ಪ, ಕೆ ಶರಣಪ್ಪ, ರಾಘವೇಂದ್ರ ಕಾಜನಗೌಡ, ಹುಸೇನಪ್ಪ ಗೊಬ್ಬಿ ಸೇರಿದಂತೆ ಅನೇಕ ಗಣ್ಯರು ಜ್ಯೋತಿ ಬೆಳಗಿಸಿ, ಚೌಡಯ್ಯನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ಗಂಗಾಪರಮೇಶ್ವರಿ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಸ್ವಾಮಿ ವಿವೇಕಾನಂದ ಸೇವಾ ರಕ್ತ ಭಂಡಾರ ಲಿಂಗಸುಗೂರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಗ್ರಾಮದ ಅನೇಕ ಯುವಕರು ರಕ್ತದಾನ ಮಾಡಿದರು.
ಗ್ರಾಮದ ಅಂಬಿಗರ ಚೌಡಯ್ಯ ಭವನದಿಂದ ಆರಂಭವಾದ ಅಂಬಿಗರ ಚೌಡಯ್ಯರ ಭಾವಚಿತ್ರ ಮೆರವಣಿಗೆ ವಿವಿಧ ಬೀದಿಗಳ ಮೂಲಕ ಸಂತೆಕಟ್ಟೆಯವರೆಗೂ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಸಮುದಾಯದ ಜನರು, ಮುಖಂಡರು ನೂರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ಸೌಹಾರ್ದತೆ ತೋರಿದರು. ಅಲ್ಲದೇ ಗ್ರಾಮದಲ್ಲಿನ ಮಹರ್ಷಿ ವಾಲ್ಮೀಕಿ, ಒಳಬಳ್ಳಾರಿ ಚನ್ನಬಸವೇಶ್ವರ ಸ್ವಾಮೀಜಿ, ಡಾ.ಬಿ.ಆರ್ ಅಂಬೇಡ್ಕರ್, ನಿಜ ಶರಣ ಅಂಬಿಗರ ಚೌಡಯ್ಯ, ಕನಕದಾಸ ಸೇರಿದಂತೆ ಎಲ್ಲಾ ಮಹಾತ್ಮರ ನಾಮಫಲಕಗಳಿಗೆ ಪೂಜೆ ಸಲ್ಲಿಸುವ ಮೂಲಕ ಎಂದಿನಂತೆ ಇಂದು ಕೂಡ ವಿಶೇಷತೆ ಮೆರೆಯಲಾಯಿತು.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )


Friday, January 24, 2020

ಮಹರ್ಷಿ ವಾಲ್ಮೀಕಿ ನಾಮಫಲಕಕ್ಕೆ ಅಪಮಾನ: ಯುವಪಡೆಯಿಂದ ಸಿಎಂಗೆ ಪತ್ರ, ಕ್ರಮಕ್ಕೆ ಆಗ್ರಹ

ದೊರೆ ನ್ಯೂಸ್ ಕನ್ನಡ: ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹಿರೇತೆಮ್ಮಿನಾಳ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನಾಮಫಲಕಕ್ಕೆ ಕಿಡಿಗೇಡಿಗಳು ಅಪಮಾನ ಮಾಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಮಹರ್ಷಿ ವಾಲ್ಮೀಕಿ ನಾಮಫಲಕಗಳಿಗೆ ಹಾಗೂ ಪ್ರತಿಮೆಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವಪಡೆ ಮಾನ್ವಿ ತಾಲೂಕು ಘಟಕದ ಮುಖಂಡರು ಆಗ್ರಹಿಸಿದ್ದಾರೆ. 
ಮಾನ್ವಿ ತಹಶಿಲ್ದಾರರ ಕಛೇರಿಗೆ ಭೇಟಿ ನೀಡಿ ತಹಶಿಲ್ದಾರರ ಮೂಲಕ ಸಿಎಂಗೆ ಮನವಿ ಸಲ್ಲಿಸಿದ ಯುವಪಡೆಯ ಮುಖಂಡರು, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇತೆಮ್ಮಿನಾಳ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ಮಹರ್ಷಿ ವಾಲ್ಮೀಕಿ ನಾಮಫಲಕಕ್ಕೆ ದಿನಾಂಕ: 23/01/2020ರಂದು ಕಿಡಿಗೇಡಿಗಳು ಸಗಣಿ ಎಸೆದು ಅಪಮಾನ ಮಾಡಿದ್ದಾರೆ. ಇದು ಖಂಡನೀಯ ಘಟನೆಯಾಗಿದೆ. ದೇಶಕ್ಕೆ ಶಾಂತಿ ಸಂದೇಶ ಸಾರಿದ ಮಹಾತ್ಮರ ಭಾವಚಿತ್ರಕ್ಕೆ ಈ ರೀತಿಯ ಅಪಮಾನ ಮಾಡಿರುವುದು ನೋವಿನ ಸಂಗತಿಯಾಗಿದೆ. 
ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಆಚರಣೆಯ ಸಂದರ್ಭದಲ್ಲಿ ಪ್ರತಿಮೆ ಶೃಂಗಾರಗೊಳಿಸಿ ಸಮಾಜದ ಮುಖಂಡರ ಬಗ್ಗೆ ಗುಣಗಾನ ಮಾಡಿ ಮರೆತು ಬಿಡಲಾಗುತ್ತಿದೆ. ಇದರಿಂದಾಗಿ ಮಹರ್ಷಿ ವಾಲ್ಮೀಕಿ ಪ್ರತಿಮೆ, ನಾಮ ಫಲಕಗಳಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದ ಅನೇಕ ಕಡೆಗಳಲ್ಲಿ ಈ ರೀತಿಯ ಘಟನೆಗಳು ಜರುಗಿದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಈಗಲಾದರೂ ಮುಖ್ಯಮಂತ್ರಿಗಳು ಮಹರ್ಷಿ ವಾಲ್ಮೀಕಿ ಭಾವಚಿತ್ರ, ನಾಮ‌ ಫಲಕ, ಪ್ರತಿಮೆಗಳಿಗೆ ಸೂಕ್ತ ರಕ್ಷಣೆ ನೀಡುವಂತೆ ಸಂಬಂಧಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶಿಸಬೇಕು. 
ಇಂತಹ ಘಟನೆಗಳು ಮರು ಕಳಿಸದಂತೆ ಕ್ರಮ ಕೈಗೊಳ್ಳಬೇಕು. ಹಾಗೂ ಅಪಮಾನ ಮಾಡಿರುವ ಕಿಡಿಗೇಡಿಗಳನ್ನು ಗುರುತಿಸಿ ಗುಂಡಾ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಾಯ್ದೆಗಳನ್ವಯ ಪ್ರಕರಣ ದಾಖಲಿಸಿ ಆರೋಪಿಗಳನ್ನು ತಕ್ಷಣವೇ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಮನವಿ ಪತ್ರದ ಮೂಲಕ ಆಗ್ರಹಿಸಿದರು. ಒಂದು ವೇಳೆ ಮಹರ್ಷಿ ವಾಲ್ಮೀಕಿ ನಾಮಫಲಕಕ್ಕೆ  ಅಪಮಾನ ಮಾಡಿದ ಆರೋಪಗಳನ್ನು ಕೂಡಲೇ ಬಂಧಿಸದಿದ್ದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದೆಂದು  ಮುಖಂಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಯುವ ಪಡೆಯ ತಾಲೂಕು ಅಧ್ಯಕ್ಷ ರಾಮಣ್ಣ ನಾಯಕ, ಮುಖಂಡರಾದ ವೆಂಕಟೇಶ ನಾಯಕ, ಅಮರೇಶ ನಾಯಕ ಜಾನೇಕಲ್, ವೆಂಕಟೇಶ ನಾಯಕ ಯರಮಲದೊಡ್ಡಿ, ಚಂದ್ರಶೇಖರ ನಾಯಕ ಚಿಮ್ಲಾಪುರ, ಬ್ರಹ್ಮ ನಾಯಕ, ಬಸವ ನಾಯಕ, ಆಂಜನೇಯ ನಾಯಕ, ತಿಪ್ಪಯ್ಯ ನಾಯಕ, ಯಲ್ಲಪ್ಪ ನಾಯಕ, ಬಾಲಯ್ಯ ನಾಯಕ ಸೇರಿದಂತೆ ಅನೇಕರಿದ್ದರು.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Tuesday, January 21, 2020

ಪಾಮನಕಲ್ಲೂರು: ಗ್ರಾಮದ ವಿವಿಧೆಡೆ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ

ಪ್ರಾಥಮಿಕ ಆರೋಗ್ಯ ಕೇಂದ್ರ ಪಾಮನಕಲ್ಲೂರು
ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ವಿವಿಧೆಡೆ ನಿಜ ಶರಣ ಅಂಬಿಗರ ಚೌಡಯ್ಯ ಜಯಂತೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಗ್ರಾಮ ಪಂಚಾಯತಿ ಕಾರ್ಯಾಲಯ ಪಾಮನಕಲ್ಲೂರು
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಯಂತೋತ್ಸವ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಭಾರ್ಗವಿ ಜಹಗಿರದಾರ, ಕಿರಿಯ ಆರೋಗ್ಯ ಸಹಾಯಕ ಎಮ್.ಡಿ ಜಲಾಲುದ್ಧಿನ್, ಕಿರಿಯ ಪ್ರಯೋಗಶಾಲಾ ತಂತ್ರಜ್ಞ ಅಸ್ಪಕ್, ಪಾರ್ಮಾಸಿಸ್ಟ್ ಚಂದ್ರಕಲಾ, ಸಿಬ್ಬಂದಿಗಳಾದ ಮಲ್ಲಮ್ಮ, ಶಾಂತಾ ಕೆ ಸೇರಿದಂತೆ ಅನೇಕರಿದ್ದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾಮನಕಲ್ಲೂರು

ಗ್ರಾಮ ಪಂಚಾಯ್ತಿಯಲ್ಲಿ ಆಚರಿಸಲಾದ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ಪರಮಣ್ಣ, ಸುಗಪ್ಪ, ಗ್ರಾಮಸ್ಥರಾದ ಗುಡದಯ್ಯ ಗಡ್ಡಿಮನೆ, ಹುಸೇನಪ್ಪ, ಮಲ್ಲಿಕಾರ್ಜುನ ಸೇರಿದಂತೆ ಅನೇಕರಿದ್ದರು.
ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಾಲತೇಶ್, ಶಶಿಕಲಾ ಕರಿಗಾರ್, ಪರಿನಾಬಿ, ಲತಾ, ರೇಣುಕಾ, ಎಸ್ಡಿಎಂಸಿ ಅಧ್ಯಕ್ಷ ಅಯ್ಯಪ್ಪ ಕುರುಬರ್, ಮುಖಂಡರಾದ ಗುಡದಯ್ಯ ಗಡ್ಡಿಮನೆ, ಮಲ್ಲಪ್ಪ ಹಿರೆಮನೆ, ಸೇರಿದಂತೆ ಅನೇಕರಿದ್ದರು.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Friday, January 17, 2020

ಗೆಜ್ಜಲಗಟ್ಟಾ: ಕುಡಿಯಲು ಚರಂಡಿ ನೀರು ಪೂರೈಕೆ: ಕರವೇ ಆರೋಪ

ಒಡೆದ ಕುಡಿಯುವ ನೀರಿನ ಪೈಪ್
ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗೆಜ್ಜಲಗಟ್ಟಾ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪನ್ನು ಚರಂಡಿಯೊಳಗೆ ಹಾಕಲಾಗಿದ್ದು, ಆ ಪೈಪ್ ಒಡೆದು ಕುಡಿಯುವ ನೀರಿನಲ್ಲಿ ಚರಂಡಿ ನೀರು ಸೇರುತ್ತಿವೆ. ಅದೇ ನೀರನ್ನು ಕುಡಿಯಲು ಪೂರೈಕೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಗೆಜ್ಜಲಗಟ್ಟಾ ಗ್ರಾಮ ಘಟಕದ ಮುಖಂಡರು ಆರೋಪಿಸಿದ್ದಾರೆ. 
ಸ್ಥಳದಲ್ಲಿ ಕರವೇ ಮುಖಂಡರು
ಚರಂಡಿಯೊಳಗೆ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದೆ, ಒಡೆದ ಪೈಪನ್ನು ದುರಸ್ತಿ ಮಾಡದೇ ಬೇಕಾಬಿಟ್ಟಿ ಸೈಕಲ್ ಟ್ಯೂಬ್ ಸುತ್ತಿದ್ದಾರೆ. ಒಡೆದ ಪೈಪ್ ನ ಮೂಲಕ ಚರಂಡಿ ನೀರು ಕುಡಿಯುವ ನೀರಿನೊಳಗೆ ಸೇರುತ್ತಿದ್ದು, ಅದೇ ನೀರನ್ನು ಗ್ರಾಮಸ್ಥರು ಕುಡಿಯುತ್ತಿದ್ದೇವೆಂದು ಕರವೇ ಗ್ರಾಮ ಘಟಕದ ಅಧ್ಯಕ್ಷ ಕಿರಣ್ ನಾಯಕ ಗೆಜ್ಜಲಗಟ್ಟಾ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಪಿಡಿಒಗೆ ಕರವೇ ಮನವಿ
ಗ್ರಾಮದಲ್ಲಿನ ನೀರಿನ ಸಮಸ್ಯೆ ಪರಿಹರಿಸುವಂತೆ ಈ ಹಿಂದೆ ಕರವೇ ಮೂಲಕ ಗ್ರಾಮ‌ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದ್ದೇವು, ಆದರೆ ಪಿಡಿಒ ಸಮಸ್ಯೆ ಪರಿಹರಿಸುವ ಬದಲಿಗೆ ಚರಂಡಿ ನೀರು ಕುಡಿಯುವಂತೆ ಮಾಡಿದ್ದಾರೆ. ಗ್ರಾಮದಲ್ಲಿನ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಾದ ಪಿಡಿಒ ಗ್ರಾಮಕ್ಕೂ ತಮಗೂ ಸಂಬಂಧವಿಲ್ಲದವರಂತೆ ನಡೆದುಕೊಳ್ಳುತ್ತಿದ್ದಾರೆ. ಪಿಡಿಒ ನಡೆಯಿಂದಾಗಿ ಗ್ರಾಮಸ್ಥರು ಚರಂಡಿ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. 
ಗ್ರಾಮದ ಕರವೇ ಮುಖಂಡರು
ಗ್ರಾಮದಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ ಆದರೆ ಅಧಿಕಾರಿಗಳಾಗಲಿ, ಅಧ್ಯಕ್ಷರಾಗಲಿ, ಸದಸ್ಯರಾಗಲಿ ಸಮಸ್ಯೆ ಪರಿಹರಿಸುವ ಕೆಲಸ ಮಾಡುತ್ತಿಲ್ಲ. ಗೆಜ್ಜಲಗಟ್ಟಾ ಗ್ರಾಮದಲ್ಲೇ ಗ್ರಾಮ ಪಂಚಾಯತಿ ಇದೆ. ಊರಿನ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕಾದ ಸಂಬಂಧಿಸಿದವರು ಕಣ್ಣು ಮುಚ್ಚಿ ಕುಳಿತಿದ್ದಾರೆಂದು ಕರವೇ ಮುಖಂಡರಾದ ಕಿರಣ್ ನಾಯಕ, ಗಫೂರ್,‌ ಸದ್ದಾಂ, ವಸಂತ್ ನಾಯಕ, ಸೋಹಿಲ್, ದಾದಾವಲಿ, ದೌಲ್, ಅಮರೇಶ್ ನಾಯಕ, ಯಲ್ಲಪ್ಪ ಸೇರಿದಂತೆ ಅನೇಕರು ದೂರಿದ್ದಾರೆ.

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Monday, January 13, 2020

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಸವರಾಜ ಸ್ವಾಮಿ ಆಯ್ಕೆ

ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಗುಡದೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಬಸವರಾಜ ಸ್ವಾಮಿ, ಉಪಾಧ್ಯಕ್ಷರಾಗಿ ಚನ್ನಪ್ಪ ಸಾಹುಕಾರ್ ಆಯ್ಕೆಯಾಗಿದ್ದಾರೆ.
ಗೋವಿಂದಪ್ಪ ನಾಯಕ ರಂಗಾಪೂರ, ಗೋನಾಳದ ಪ್ರಥಮ ದರ್ಜೆ ಗುತ್ತೆದಾರ ಚಿನ್ನನಗೌಡ, ಅಮರೇಶ ದುಗನೂರ ಹಸ್ಮಕಲ್ ರವರ ನೇತೃತ್ವದಲ್ಲಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ನೂತನ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಬಸವರಾಜ ಸ್ವಾಮಿ ಹಸ್ಮಕಲ್, ಚನ್ನಪ್ಪ ಸಾಹುಕಾರ್ ಆಯ್ಕೆಯಾಗಿರುವುದು ಸಂತಸ ತಂದಿದೆ. ಅವರನ್ನು ಅಭಿನಂದಿಸುತ್ತೇವೆಂದು ರಂಗಾಪೂರ ಗ್ರಾಮ ಪಂಚಾಯತಿ ಸದಸ್ಯೆ ಸುನೀತಾ ಗಂಡ ಬಸವರಾಜ ನಾಯಕ ಹಾಗೂ ಪತಿ ಬಸವರಾಜ ನಾಯಕ ಹರ್ಷ ವ್ಯಕ್ತಪಡಿಸಿದ್ದಾರೆ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.

ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Thursday, January 9, 2020

ಬಿಜೆಪಿಗೆ ಶಾಕ್ ನೀಡಿದ ಶ್ರೀರಾಮುಲು ಅಭಿಮಾನಿಗಳು..!


ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆ ಮಸ್ಕಿಯಲ್ಲಿ ಇಂದು ನಡೆದ ಸಿಎಎ ಪರ ಬೈಕ್ ರ್ಯಾಲಿ, ಬೃಹತ್ ಬಹಿರಂಗ ಸಭೆ ಹಾಗೂ ಬಿಜೆಪಿ ತಾಲೂಕು ಘಟಕದ ನೂತನ ಕಾರ್ಯಾಲಯ ಉದ್ಘಾಟನೆ ಮತ್ತು ಮಾಜಿ (ಅನರ್ಹ) ಶಾಸಕ ಪ್ರತಾಪಗೌಡ ಪಾಟೀಲ್ ಸೇರಿ ಅನೇಕರು ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರಿಗೆ ಶ್ರೀರಾಮುಲು ಅಭಿಮಾನಿಗಳು ಶಾಕ್ ನೀಡಿದರು.
ಹೌದು, ಪಕ್ಷದ ಕಾರ್ಯಕ್ರಮದ ಬ್ಯಾನರ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಿಜೆಪಿಯ ಹಿರಿಯ ನಾಯಕರಾದ ಶ್ರೀರಾಮುಲುರವರ ಪೋಟೋ ಹಾಕದಿದ್ದ ಕಾರಣ ಶ್ರೀರಾಮುಲು ಅಭಿಮಾನಿಗಳು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಹಿರಂಗ ಸಭೆಯ ವೇಳೆಯಲ್ಲಿ ಅನೇಕ ಯುವಕರು ಕೊಪ್ಪಳ ಸಂಸದ ಸಂಗಣ್ಣ ಕರಡಿ, ಮಾಜಿ (ಅನರ್ಹ) ಶಾಸಕ ಪ್ರತಾಪಗೌಡ ಪಾಟೀಲ್, ಬಿಜೆಪಿ ನಾಯಕ ಬಸನಗೌಡ ತುರುವಿಹಾಳ, ಬಿಜೆಪಿ ಜಿಲ್ಲಾಧ್ಯಕ್ಷರು ಸೇರಿದಂತೆ ಅನೇಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

5ಎ ಕಾಲುವೆ ಶೀಘ್ರ ಜಾರಿಗೊಳಿಸಿ: ಕರ್ನಾಟಕ ನೀರಾವರಿ ಸಂಘದಿಂದ ಆಗ್ರಹ

ದೊರೆ ನ್ಯೂಸ್ ಕನ್ನಡ: ರಾಯಚೂರು ಜಿಲ್ಲೆಯಲ್ಲಿ ಎನ್.ಆರ್.ಬಿ.ಸಿ 5ಎ ಕಾಲುವೆ ಯೋಜನೆ ಶೀಘ್ರವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಗೆ ಕರ್ನಾಟಕ ನೀರಾವರಿ ಸಂಘದ ಮಸ್ಕಿ ತಾಲೂಕು ಘಟಕದ ಮುಖಂಡರು ಮನವಿ ಸಲ್ಲಿಸಿದ್ದಾರೆ.

ಮಸ್ಕಿಯಲ್ಲಿ ಪ್ರತಿಭಟನೆ ನಡೆಸಿ  ಮನವಿ ಸಲ್ಲಿಸಿದ ಮುಖಂಡರು, ಕಳೆದೊಂದು ದಶಕದಿಂದ ಹೈದ್ರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಭಾಗದಲ್ಲಿ  ವರ್ಷದಿಂದ ವರ್ಷಕ್ಕೆ ಬರಗಾಲ ಹೆಚ್ಚುತ್ತಿದೆ. ಅದರಲ್ಲೂ ರಾಯಚೂರು ಜಿಲ್ಲೆಯಲ್ಲಿ ಬರದ ತೀವ್ರತೆ ಜಾಸ್ತಿಯಾಗಿದೆ. ಇದರಿಂದ ಕೃಷಿ ಕ್ಷೇತ್ರದಲ್ಲಿನ ಉತ್ಪಾದನಾ ಪ್ರಮಾಣ ಗಣನೀಯವಾಗಿ ಕುಗ್ಗಿದ್ದು, ರೈತ ಕುಟುಂಬಗಳು ಹೊಟ್ಟೆಪಾಡಿಗಾಗಿ ನಗರ ಪ್ರದೇಶಗಳಿಗೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಯಕ್ಕೆ ಸರಿಯಾಗಿ ಮಳೆಯಿಲ್ಲದೇ ಜೀವನ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಸರ್ಕಾರ ಹೈದ್ರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಭಾಗದಲ್ಲಿ ಕೃಷಿ ಕ್ಷೇತ್ರ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮಸ್ಕಿ ಕ್ಷೇತ್ರಕ್ಕೆ ವರದಾನವಾಗುವ ಎನ್.ಆರ್.ಬಿ.ಸಿ 5ಎ ಕಾಲುವೆ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಈ ಭಾಗದ ರೈತರ ಹಾಗೂ ಜನಸಾಮಾನ್ಯರ ಬಹುದಿನದ ನೀರಾವರಿ ಯೋಜನೆ ಬೇಡಿಕೆಯನ್ನು ಈಡೇರಿಸಬೇಕು.
ಜಿಲ್ಲೆಯನ್ನು ಹಾದುಹೋಗಿರುವ ಕೃಷ್ಣಾ ನದಿಯ ಆಲಮಟ್ಟಿ ಮತ್ತು ನಾರಾಯಣಪುರ ಡ್ಯಾಂನಿಂದ ಪ್ರತಿ ವರ್ಷವೂ ಲಕ್ಷಾಂತರ ಕ್ಯೂಸೆಕ್ಸ್ ನೀರು ಪೋಲಾಗಿ ಆಂಧ್ರದ ಪಾಲಾಗುತ್ತಿದೆ. ಆದರೆ ಅನತಿ ದೂರದಲ್ಲಿರುವ ಜಿಲ್ಲೆಯ ಜನರ ಜಮೀನುಗಳಿಗೆ ಹನಿ ನೀರು ಇಲ್ಲದಾಗಿರುವುದು ನೀರಾವರಿ ಯೋಜನೆ ಜಾರಿಗೊಳಿಸಲು ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲದಿರುವುದನ್ನು ತೋರಿಸುತ್ತದೆ. ಕಳೆದ ಹತ್ತಾರು ವರ್ಷಗಳಿಂದ ಮಸ್ಕಿ ಕ್ಷೇತ್ರದ ಐವತ್ತಕ್ಕೂ ಹೆಚ್ಚು ಹಳ್ಳಿಗಳ ರೈತರು ನೀರಾವರಿ ಯೋಜನೆಗಾಗಿ ಹೋರಾಟ ಮಾಡುತ್ತಾ ಬಂದರು ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. 
ಪ್ರತಿಯೊಂದು ಸರ್ಕಾರದ ಮುಖ್ಯಮಂತ್ರಿಗಳ ಹಾದಿಯಾಗಿ ಜಲಸಂಪನ್ಮೂಲ ಸಚಿವರು, ಸಂಸದರು, ನೀರಾವರಿ ನಿಗಮದ ಮುಖ್ಯಸ್ಥರು, ಶಾಸಕರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಅನೇಕ ಜನ ಪ್ರತಿನಿಧಿಗಳಿಗೆ ಕಳೆದ ಹತ್ತು ವರ್ಷಗಳಿಂದ ಹೋರಾಟಗಳ ಮೂಲಕ ಮನವಿ ಪತ್ರಗಳನ್ನು ಸಲ್ಲಿಸುತ್ತಾ ಬಂದರು ಯಾವುದೇ ಪ್ರಯೋಜನವಾಗಿಲ್ಲ. ಹಾಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರೂ ಈ ಹಿಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 5ಎ ಕಾಲುವೆ ಜಾರಿಗೊಳಿಸುತ್ತೇವೆ ಎಂದಿದ್ದರು ಈಗ ಸುಮ್ನನಾಗಿದ್ದಾರೆ. 
ಇದು ಈ ಭಾಗದ ಸುಮಾರು ಐವತ್ತಕ್ಕೂ ಹೆಚ್ಚು ಹಳ್ಳಿಗಳ ರೈತರಿಗೆ ಸರ್ಕಾರ ಮಾಡುತ್ತಿರುವ ದ್ರೋಹವಾಗಿದೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸಿ 5ಎ ಕಾಲುವೆ ನಿರ್ಮಾಣ ಮಾಡಲು ಮುಂದಾಗದಿದ್ದರೆ ಮುಂದೆ ನಡೆಯಲಿರುವ ಉಪಚುನಾವಣೆ ಸೇರಿ ಬರುವ ಚುನಾವಣೆಗಳಲ್ಲಿ ಮತದಾನದಿಂದ ದೂರ ಉಳಿಯುವ ನಿರ್ಧಾರ ತೆಗೆದುಕೊಳ್ಳುತ್ತೇವೆ. ಆದಷ್ಟು ಬೇಗ ಸರ್ಕಾರ 5ಎ ಕಾಲುವೆ ಜಾರಿಗೊಳಿಸಬೇಕೆಂದು  ಕರ್ನಾಟಕ ನೀರಾವರಿ ಸಂಘದ ಮಸ್ಕಿ ತಾಲೂಕು ಘಟಕದ ಮುಖಂಡರು ಮತದಾನ ಬಹಿಷ್ಕಾರದ ಮುನ್ನೆಚ್ಚರಿಕೆ ನೀಡಿದರು. ರೈತರ ಮನವಿ ಆಲಿಸಲು ಬಂದಿದ್ದ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್, ಬಿಜೆಪಿ ಮುಖಂಡರಾದ ಬಸನಗೌಡ ತುರವಿಹಾಳ ಸೇರಿದಂತೆ ಅನೇಕರನ್ನು ರೈತರು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ಬಸವರಾಜಪ್ಪಗೌಡ ಹರ್ವಾಪೂರ, ಎನ್.ಶಿವನಗೌಡ ವಟಗಲ್,  ಬಸನಗೌಡ ಪಾಟೀಲ್ ಮುದಬಾಳ, ವಿಶ್ವನಾಥರೆಡ್ಡಿ ಅಮೀನಗಡ, ತಿಮ್ಮನಗೌಡ ಚಿಲ್ಕರಾಗಿ, ನಾಗರೆಡ್ಡೆಪ್ಪ ದೇವರಮನಿ ಬುದ್ದಿನ್ನಿ, ಕುಶಪ್ಪ ಅಮೀನಗಡ, ಬಸವರಾಜ ಇರಕಲ್ ಸೇರಿದಂತೆ ಅನೇಕರಿದ್ದರು.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

Sunday, January 5, 2020

ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗಸೂಚಿ ಶಿಲ್ಪಾಶ್ರೀ ಕಂಪ್ಯೂಟರ್ಸ್


ಸ್ಪರ್ಧಾತ್ಮಕ ವಿಷಯಗಳ ಮಾಹಿತಿ ಕಣಜ ಶಿಲ್ಪಾಶ್ರೀ ಕಂಪ್ಯೂಟರ್ ವಾಟ್ಸಾಪ್ ಗ್ರುಪ್
ಅಶೋಕ ನಾಯಕ ದಿದ್ದಿಗಿ
ಇದು ಆಧುನಿಕ ಯುಗ, ಈಗ ಏನಿದ್ದರೂ ಕಂಪ್ಯೂಟರ್, ಆಂಡ್ರಾಯ್ಡ್ ಮೊಬೈಲ್ ಪೋನ್ ಗಳದ್ದೇ ದರ್ಬಾರ್. ಬಹುತೇಕರು ಮೊಬೈಲ್ ಇಲ್ಲದೇ ಬದುಕೇ ಇಲ್ಲ ಅಂದುಕೊಂಡಿದ್ದಾರೆ. ಇದೇ ಮೊಬೈಲ್ ಅದೆಷ್ಟೋ ಜನರ ಬದುಕು ಹಾಳಾಗುವಂತೆ ಮಾಡಿದೆ. ಮೊಬೈಲ್ ಗಳನ್ನು ಕೆಟ್ಟ ಕೆಲಸಗಳಿಗೆ ಬಳಸಿಕೊಂಡ ಬಹುತೇಕ ಯುವ ಸಮುದಾಯ ಹಾಳಾಗಿದೆ. ಆದರೆ ಕೆಲವರು ಇದೇ ಮೊಬೈಲ್ ಗಳನ್ನು ಬಳಸಿಕೊಂಡು ಜೀವನದಲ್ಲಿ ಅಂದುಕೊಂಡದನ್ನ ಸಾಧಿಸಿದ್ದಾರೆ. ಆಂಡ್ರಾಯ್ಡ್ ಮೊಬೈಲ್ ಇದ್ರೆ ಸಾಲದು ಅದಕ್ಕೆ ಇಂಟರ್ನೆಟ್ & ವಾಟ್ಸಾಪ್, ಫೇಸ್ಬುಕ್ ಗ್ರುಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಅವಶ್ಯಕ. ಸಾಮಾಜಿಕ ಜಾಲತಾಣಗಳನ್ನ ಅದರಲ್ಲೂ ಹೆಚ್ಚಾಗಿ ಫೇಸ್ಬುಕ್, ವಾಟ್ಸಾಪ್ ಗ್ರುಪ್ ಗಳನ್ನು ಮಾಡಿಕೊಂಡು, ಅವುಗಳನ್ನು ಬಳಸಿಕೊಂಡು ಜಾತಿ, ಧರ್ಮದ ಪ್ರಚಾರ ಮಾಡುವವರು ಬಹಳಷ್ಟು ಜನರಿದ್ದಾರೆ.
ಪ್ರಸ್ತುತ ಸಮಾಜದಲ್ಲಿ ಸ್ವಜಾತಿ ಪ್ರೇಮಿಗಳು ಈ ವಾಟ್ಸಾಪ್ ಮತ್ತು ಫೇಸ್ಬುಕ್ ಗ್ರುಪ್ ಗಳನ್ನು ಮಾಡಿಕೊಂಡು ತಮ್ಮ‌ ತಮ್ಮ ಜಾತಿಯ ಪ್ರಚಾರ ಮಾಡುತ್ತಿದ್ದಾರೆ. ಅಲ್ಲದೇ ಅನ್ಯ ಸಮುದಾಯಗಳನ್ನು ಟೀಕಿಸಲು, ಅನ್ಯ ಧರ್ಮದ ವಿರುದ್ಧ ಬರೆಯಲು ಈ ಸಾಮಾಜಿಕ ಜಾಲತಾಣಗಳು ಬಳಕೆಯಾಗುತ್ತಿವೆ.
ಇಂತಹ ಕಾಲಘಟ್ಟದಲ್ಲಿ ಸಮಾಜಕ್ಕೆ ಅದರಲ್ಲೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಸ್ಪರ್ಧಾಳುಗಳಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಇಲ್ಲೊಬ್ಬರು ಎಲೆಮರೆಯ ಕಾಯಿಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ. 
ಹೌದು, ಸಮಾಜಮುಖಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ತಯಾರಾಗಿರುವ ಯುವ ಸಮುದಾಯಕ್ಕೆ ಸಹಾಯ, ಸಹಕಾರ ನೀಡುವ ಕೆಲಸವನ್ನು ಕಳೆದ ದಶಕದಿಂದ ಮಾಡುತ್ತಿದ್ದಾರೆ ರಾಯಚೂರು ಜಿಲ್ಲೆ ಲಿಂಗಸುಗೂರಿನ ಶಿಲ್ಪಾಶ್ರೀ ಕಂಪ್ಯೂಟರ್ಸ್ ನ ಮಾಲಿಕ ಅಶೋಕ ನಾಯಕ ದಿದ್ದಿಗಿ. ಅಶೋಕ ನಾಯಕ ದಿದ್ದಿಗಿಯವರು ಮೂಲತಃ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ದಿದ್ದಿಗಿ ಗ್ರಾಮದವರಾಗಿದ್ದಾರೆ. ಇವರು ದಶಕಗಳಿಂದ ಲಿಂಗಸುಗೂರಿನಲ್ಲಿ ಶಿಲ್ಪಾಶ್ರೀ ಕಂಪ್ಯೂಟರ್ಸ್ ಎಂಬ ಸಂಸ್ಥೆಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಬಹುತೇಕರಿಗೆ ನೆರವಾಗುತ್ತಿದ್ದಾರೆ. ಸಾವಿರಾರು ಜನರು ಈ ಸಂಸ್ಥೆಯ ಸಹಾಯ, ಸಹಕಾರದಿಂದ ಈಗಾಗಲೇ ಉನ್ನತ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ನೋಟ್ಸ್, ಮಾಹಿತಿ, ಉದ್ಯೋಗ ಮಾಹಿತಿ, ಶೈಕ್ಷಣಿಕ ಮಾಹಿತಿ ಸೇರಿದಂತೆ ಅನೇಕ ಮಾಹಿತಿಗಳನ್ನು ಶಿಲ್ಪಾಶ್ರೀ ಕಂಪ್ಯೂಟರ್ ಹೆಸರಿನ ವಾಟ್ಸಾಪ್ ಗ್ರುಪ್ ಗಳ ಮೂಲಕ ದಿನನಿತ್ಯ ನೀಡುತ್ತಿದ್ದಾರೆ. ಅಲ್ಲದೇ ಶಿಲ್ಪಾಶ್ರೀ ಕಂಪ್ಯೂಟರ್ ಹೆಸರಿನಲ್ಲಿ ಅನೇಕ ಗ್ರುಪ್ ಗಳನ್ನು ಮಾಡಿದ್ದು, ಪ್ರತಿಯೊಂದು ಗ್ರುಪ್ ನಲ್ಲೂ 256 ಸದಸ್ಯರು ಇದ್ದಾರೆ. ಅನೇಕ ಅಧಿಕಾರಿಗಳು, ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬಯಸುವವರು, ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉನ್ನತ ಹುದ್ದೆಗಳಲ್ಲಿರುವವರು ಈ ಗ್ರುಪ್ ಗಳಲ್ಲಿದ್ದಾರೆ.
2015ರ ಸಾಲಿನಲ್ಲಿ ಕೆಎಎಸ್ ಪರೀಕ್ಷೆ ಬರೆದು ಮೊನ್ನೆಯಷ್ಟೇ ಕೆಎಎಸ್ ಅಧಿಕಾರಿಗಳಾಗಿ ಆಯ್ಕೆಯಾಗಿರುವ ಲಿಂಗಸುಗೂರು ತಾಲೂಕಿನ ತಿರುಪತಿ ವಿ ಪಾಟೀಲ್, ಶಿವಾನಂದ ಪೂಜಾರಿ, ಸೋಮಶೇಖರ್ ಬಿರಾದಾರ, ಕೂಡ ಇವರದ್ದೇ ಸಂಸ್ಥೆಯ ಮೂಲಕ ಕೆಎಎಸ್ ಅಪ್ಲಿಕೇಶನ್ ಹಾಕಿದ್ದರು ಅಲ್ಲದೇ ಶಿಲ್ಪಾಶ್ರೀ ಕಂಪ್ಯೂಟರ್ ಗ್ರುಪ್ ಗಳಿಂದ ಅನೇಕ ಮಾಹಿತಿಯನ್ನು ಪಡೆದುಕೊಂಡಿದ್ದರು ಎನ್ನಲಾಗಿದೆ. 
ಅಲ್ಲದೇ ಶಿಲ್ಪಾಶ್ರೀ ಕಂಪ್ಯೂಟರ್ ವಾಟ್ಸಾಪ್ ಗ್ರುಪ್ ಗಳು ಜಿಲ್ಲೆಯ ಲಿಂಗಸುಗೂರು, ಮಸ್ಕಿ, ಮಾನ್ವಿ, ಸಿಂಧನೂರು, ದೇವದುರ್ಗ, ರಾಯಚೂರು, ಸಿರವಾರ ತಾಲೂಕು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಯುವ ಸಮುದಾಯವನ್ನು ಒಳಗೊಂಡಿವೆ. 
ಶಿಲ್ಪಾಶ್ರೀ ಕಂಪ್ಯೂಟರ್ ವಾಟ್ಸಾಪ್ ಗ್ರುಪ್
ರಾಜ್ಯದ ವಿವಿಧ ಕಡೆಗಳಲ್ಲಿ ಕೆಲಸ ನಿರ್ವಹಿಸುವ ಬಹುತೇಕರು ಯಾವುದೇ ಅಪ್ಲಿಕೇಶನ್ ಹಾಕುವುದಿದ್ದರೇ ತಮ್ಮ ಕೆಲಸಗಳ ನಡುವೆಯೂ ಶಿಲ್ಪಾಶ್ರೀ ಕಂಪ್ಯೂಟರ್ಸ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸುತ್ತಿರುತ್ತಾರೆ, ಇದು ಶಿಲ್ಪಾಶ್ರೀ ಕಂಪ್ಯೂಟರ್ಸ್ ನ ಜನಪ್ರಿಯತೆಗೆ ಸಾಕ್ಷಿ. ಅಲ್ಲದೇ ಅನೇಕ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಅರ್ಜಿ, ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳ ಪ್ರವೇಶಾತಿ ಅರ್ಜಿಗಳನ್ನು ಇದೇ ಕಂಪ್ಯೂಟರ್ಸ್ ನಲ್ಲಿ ಹಾಕುವುದನ್ನು ಕಾಣಬಹುದಾಗಿದೆ.
ಇನ್ನೂ ಶಿಲ್ಪಾಶ್ರೀ ಕಂಪ್ಯೂಟರ್ಸ್ ನ ಮಾಲಿಕ ಅಶೋಕ ನಾಯಕ ದಿದ್ದಿಗಿಯವರು ಕೂಡ ಪ್ರತಿಯೊಬ್ಬರನ್ನು ಪ್ರೀತಿ ವಿಶ್ವಾಸದಿಂದ ಕಾಣುವುದಲ್ಲದೇ ಅವರ ಕೆಲಸಗಳನ್ನು ಪ್ರಾಮಾಣಿಕವಾಗಿ ಮುಗಿಸಿಕೊಡುತ್ತಾರೆ. ಇದು ಅವರ ಜನಪ್ರಿಯತೆಗೆ ಹಿಡಿದ ಕನ್ನಡಿಯಾಗಿದೆ. ಯಾವುದೇ ಅಭ್ಯರ್ಥಿ ತಮ್ಮ ಸಂಸ್ಥೆಗೆ ಬಂದು ಯಾವುದೇ ಮಾಹಿತಿ ಕೇಳಿದರು ನೀಡುವ ಅಶೋಕ, ವಾಟ್ಸಾಪ್ ಗ್ರುಪ್ ಗಳಲ್ಲಿ ಕೂಡ ಪ್ರತಿನಿತ್ಯ ಅನೇಕ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿರುತ್ತಾರೆ.
ಸ್ವಾರ್ಥಕ್ಕಾಗಿ ಸಮಾಜವನ್ನು ಬಲಿಕೊಡುವ ಬಹುತೇಕರ ನಡುವೆಯೂ ತಾನೊಬ್ಬ ಉತ್ತಮ ಶಿಕ್ಷಣವಂತನಾಗಿಯೂ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುವ ಕಾರ್ಯವನ್ನು ಮೈಗೂಡಿಸಿಕೊಂಡು ಸಾಗುತ್ತಿರುವ ಅಶೋಕ ನಾಯಕ ದಿದ್ದಿಗಿಯವರ ಕಾರ್ಯಕ್ಕೆ ಅನೇಕ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಿಂದುಳಿದ ಜಿಲ್ಲೆ, ಬಿಸಿಲನಾಡು, ಬರದನಾಡು ಎಂಬ ಹಣೆಪಟ್ಟಿ ಹಾಗೂ ಬಂಗಾರದ ನಾಡು ಎಂಬ ಬಿರುದು ಪಡೆದಿರುವ ಜಿಲ್ಲೆಯಲ್ಲಿ ಇಂತಹ ನಿಸ್ವಾರ್ಥ ಸೇವೆ ಮಾಡುತ್ತಿರುವ ಅಶೋಕ ನಾಯಕರೊಂದಿಗೆ ಚನ್ನಬಸವ ಗುಡೇದ್ ಕೈಜೋಡಿಸಿದ್ದು ಇವರ ಕಾರ್ಯ ಸಮಾಜಕ್ಕೆ ಮಾದರಿಯಾಗಲಿ ಎಂಬುದೇ ನಮ್ಮ ಆಶಯವಾಗಿದೆ.
-------------------------------

ಅಶೋಕ ನಾಯಕರ ಕಾರ್ಯ ಉತ್ತಮವಾಗಿದೆ:

ಅಶೋಕ ನಾಯಕ ದಿದ್ದಿಗಿಯವರು ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಅವರ ಕಾರ್ಯ ಉತ್ತಮವಾಗಿದೆ. ಶಿಲ್ಪಾಶ್ರೀ ಕಂಪ್ಯೂಟರ್ಸ್ ಅನೇಕರಿಗೆ ದಾರಿ ದೀಪವಾಗಿದೆ. ನಾನು ಕೂಡ ಅದೇ ಸಂಸ್ಥೆಯ ವಾಟ್ಸಾಪ್ ಗ್ರುಪ್ ಗಳಲ್ಲಿ ಬರುವ ನೋಟ್ಸ್ ಬಳಸಿಕೊಂಡು ಕೆಎಎಸ್ ಪರೀಕ್ಷೆ ಎದುರಿಸಿದ್ದೇನೆ. ನಾನು ಕೆಎಎಸ್ ಪಾಸ್ ಆಗಲು ಶಿಲ್ಪಾಶ್ರೀ ಕಂಪ್ಯೂಟರ್ ವಾಟ್ಸಾಪ್ ಗ್ರುಪ್ ಕೂಡ ಸಹಾಯಕವಾಗಿದೆ. 

ಶಿವಾನಂದ ಪೂಜಾರಿ, ನೂತನ ಕೆಎಎಸ್ ಅಧಿಕಾರಿ

---------------------------------

ಶಿಲ್ಪಾಶ್ರೀ ಗ್ರುಪ್ ಗಳು ಉತ್ತಮ ಮಾಹಿತಿ ನೀಡುತ್ತವೆ:

ಶಿಲ್ಪಾಶ್ರೀ ಕಂಪ್ಯೂಟರ್ಸ್ ನ ಅಶೋಕ ನಾಯಕ ದಿದ್ದಿಗಿಯವರು ಮಾಡಿರುವ ಶಿಲ್ಪಾಶ್ರೀ ಕಂಪ್ಯೂಟರ್ ವಾಟ್ಸಾಪ್ ಗ್ರುಪ್ ಗಳು ಉತ್ತಮ ಮಾಹಿತಿ ನೀಡುತ್ತವೆ. ಅವುಗಳನ್ನು ಸರಿಯಾಗಿ ಉಪಯೋಗಿಸಿಕೊಂಡವರು ಕೆಎಎಸ್ ನಲ್ಲಿ ಯಶಸ್ಸು ಕಾಣಬಹುದಾಗಿದೆ. ಇಂತಹ ಅವಕಾಶಗಳನ್ನು ಯುವಕರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ತಿರುಪತಿ ವಿ ಪಾಟೀಲ್, ನೂತನ ಕೆಎಎಸ್ ಅಧಿಕಾರಿ

----------------------------------
ಶಿಲ್ಪಾಶ್ರೀ ಕಂಪ್ಯೂಟರ್ಸ್ ವಾಟ್ಸಾಪ್ ಗ್ರುಪ್ ನಲ್ಲಿ ಕೆಎಎಸ್, ಐಎಎಸ್, ಪಿಎಸ್ಐ ಸೇರಿದಂತೆ ಪ್ರತಿಯೊಂದು ಸರ್ಕಾರಿ ಹುದ್ದೆಗಳಿಗೆ ಅನುಕೂಲವಾಗುವ ರೀತಿಯ ನೋಟ್ಸ್, ಮಾಹಿತಿಗಳನ್ನು ಅಪ್ಡೇಟ್ ಮಾಡುತ್ತೇವೆ. ಅದು ಪ್ರತಿಯೊಬ್ಬ ವ್ಯಕ್ತಿಗೂ ಅನುಕೂಲವಾಗುವ ರೀತಿಯಲ್ಲಿ ಇರುತ್ತದೆ. ಈ ಸಾರಿ ಈ ಭಾಗದ ಐವರು ಕೆಎಎಸ್ ಪರೀಕ್ಷೆ ಪಾಸಾಗಿದ್ದು, ನನ್ನ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ಸಂತಸವಾಗುತ್ತದೆ. ನಮ್ಮ ವಾಟ್ಸಾಪ್ ಗ್ರುಪ್ ಸೇರಬಯಸುವವರು ಹೆಸರು, ವಿಳಾಸದೊಂದಿಗೆ ನನ್ನ ವಾಟ್ಸಾಪ್ ಸಂಖ್ಯೆ: 9164075256 ಗೆ ಸಂದೇಶ ಕಳುಹಿಸಬಹುದು.

ಅಶೋಕ ನಾಯಕ ದಿದ್ದಿಗಿ, ಶಿಲ್ಪಾಶ್ರೀ ಕಂಪ್ಯೂಟರ್ಸ್ ನ ಮಾಲಿಕ 

-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )

ಅಂದು ಗಡಿ ಕಾಯುವ ಯೋಧ ಇಂದು ಕೆಎಎಸ್ ಅಧಿಕಾರಿ


ಶಿವಾನಂದ ಪೂಜಾರಿ
ಹುಟ್ಟು ಉಚಿತ ಸಾವು ಖಚಿತ ಸಾಧನೆಯೊಂದೆ ಶಾಶ್ವತ ಅನ್ನೋ ಮಾತು ಹೇಳುವುದು ಸುಲಭ, ಸಾಧಿಸಿ ತೋರಿಸುವುದು ಕಷ್ಟ ಅನ್ನೋ ಜನರ ಮಧ್ಯದಲ್ಲಿ ಅನೇಕರು ಸಾಧಿಸಿ ಗುರುತಿಸಿಕೊಂಡಿದ್ದಾರೆ. ಅವರವರ ಕ್ಷೇತ್ರಗಳಲ್ಲಿ ಮುಗಿಲೆತ್ತರದ ಸಾಧನೆಗೈದಿದ್ದಾರೆ. ಆದರೆ ಬಹುತೇಕ ಜನರು ಅದೇಗೋ ಭೂಮಿಗೆ ಬಂದಿದ್ದಿವಿ, ಅದೇಗೋ ಹೋಗ್ತಿವಿ ಏನ್ ಮಾಡೋದು ಅನ್ನೋ ಮನಸ್ಥಿತಿಯಲ್ಲೇ ಜೀವನ ಸಾಗಿಸ್ತಿದ್ದಾರೆ. ಇಂತವರ ನಡುವೆಯೇ ಅದೆಷ್ಟೋ ಸಮಸ್ಯೆ, ಕಷ್ಟಗಳನ್ನು ಮೆಟ್ಟಿನಿಂತು ಅಂದುಕೊಂಡದನ್ನ ಸಾಧಿಸಿದವರು ಬೆರಳೆಣಿಕೆಯಷ್ಟು ಜನರು ಮಾತ್ರ. 

ಆ ಬೆರಳೆಣಿಕೆಯಷ್ಟು ಜನರಲ್ಲಿ ಗುರುತಿಸಿಕೊಂಡಿದ್ದಾರೆ ಬಿಸಿಲನಾಡು, ಬರದನಾಡು ಅನ್ನೋ ಹಣೆಪಟ್ಟಿ ಹೊಂದಿರುವ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಈಚನಾಳ ಗ್ರಾಮದ ಶಿವಾನಂದ ಪೂಜಾರಿ. ಶಿವಾನಂದ ಪೂಜಾರಿ ಹುಟ್ಟಿದ್ದು 31/01/1981ರಲ್ಲಿ, ತಂದೆ ಹನುಮಂತಪ್ಪ ಪೂಜಾರಿ, ತಾಯಿ ಹನುಮಮ್ಮ.
ಬಡ ದಂಪತಿಗಳ ಏಳನೆಯ ಮಗನಾಗಿ ಜನಿಸಿದ ಶಿವಾನಂದ. ಬೆಟ್ಟದಷ್ಟು ಕಷ್ಟಗಳ ನಡುವೆಯೇ ಒಂದನೇ ತರಗತಿಯಿಂದ ಏಳನೇ ತರಗತಿಯೊರಗಿನ ಶಿಕ್ಷಣವನ್ನು ಹುಟ್ಟೂರಿನ ಸರಕಾರಿ ಶಾಲೆಯಲ್ಲೇ  ಮುಗಿಸಿದ್ದಾರೆ. ಎಂಟನೇ ತರಗತಿಯಿಂದ ಪಿಯುಸಿವರೆಗಿನ ಶಿಕ್ಷಣವನ್ನು ಲಿಂಗಸುಗೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. ಇಷ್ಟೆಲ್ಲಾ ಶಿಕ್ಷಣ ಪಡೆದುಕೊಂಡಿರುವ ಶಿವಾನಂದ, ದೇಶ ಸೇವೆಗಾಗಿ ಇಂಡಿಯನ್ ಆರ್ಮಿ ಸೇರಿಕೊಂಡು ಸೇನೆಯಿಂದ ನಿವೃತಿಯಾಗಿ ಕೆಎಎಸ್ ಅಧಿಕಾರಿಯಾಗಿದ್ದಾರೆ.

ಶಿವಾನಂದರ ಸೇವೆಗಳು
ಶಿವಾನಂದ ಸೇನೆಗೆ ಸೇರಿ ನಿವೃತ್ತಿಯಾದ ನಂತರ, ರಾಯಚೂರಿನಲ್ಲಿ ಜಿಯೋ ಕಂಪನಿಯ ಸೆಕ್ಯೂರಿಟಿ ಗಾರ್ಡ್ ಆಗಿ ಸೇವೆ ಸಲ್ಲಿದ್ದರು. ನಂತರ ಜಿಪಿಎಸ್ ಗ್ರೇಡ್ ಒನ್, ಪಿಡಿಒ ಹುದ್ದೆಗಳು ಒಲಿದು ಬಂದಿದ್ದವು. ಬಳಿಕ ಬಳ್ಳಾರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆಗೆ ಆಯ್ಕೆಯಾಗಿ ಅದೇ ಸೇವೆಯನ್ನು ಮುಂದುವರೆಸುತ್ತಿದ್ದು, ಇದೀಗ ಕೆಎಎಸ್ ಪರೀಕ್ಷೆ ಬರೆದು ವಾಣಿಜ್ಯ ತೆರಿಗೆ ಅಧಿಕಾರಿ (ಸಿಟಿಒ) ಹುದ್ದೆಗೆ ಆಯ್ಕೆಯಾಗಿದ್ದಾರೆ.
ಪತ್ನಿ ಮಕ್ಕಳೊಂದಿಗೆ ಶಿವಾನಂದ ಪೂಜಾರಿ
ಶಿವಾನಂದ ಬದುಕಿನ ಬುತ್ತಿ ಬಿಚ್ಚಿಟ್ಟದ್ದು ಹೀಗೆ:

ಅಂದು ಚಿಕ್ಕ ವಯಸ್ಸಿನಲ್ಲಿ ಗೋಲಿ ಆಡುತ್ತಿದ್ದ ನಾನು ಮುಂದೊಂದು ದಿನ ಭಾರತ ಮಾತೆಯ ಸೇವೆಯಲ್ಲಿ ನಿಜವಾದ ಆಟ ಆ ಗೋಲಿಗಳಿಂದಲೇ ಆರಂಭಿಸಿದೆ. ಆ ಚಿಕ್ಕ ವಯ‍ಸ್ಸಿನಲ್ಲಿ ದಿಕ್ಕು ತಿಳಿಯದೇ ಹುಚ್ಚನಂತೆ  ಬೀದಿ ಬೀದಿಗಳಲ್ಲಿ ಆಟ ಆಡಿಕೊಂಡಿದ್ದೆ. ನನ್ನ ತಾಯಿ ಶಾಲೆಗೆ ಕಳಿಸಿ ಶಿಕ್ಷಣವನ್ನು ಕೊಡಿಸಿದಳು . ಜೊತೆಗೆ ಒಳ್ಳೆಯ ನೀತಿ ಪಾಠವನ್ನು ಹೇಳಿಕೊಟ್ಟಿದ್ದಾಳೆ. 
ಬಾಲ್ಯ ಜೀವನದಲ್ಲಿ  ನಾನು ತಿಂದ ಏಟುಗಳು ನನ್ನ ವಯಸ್ಸಿನಲ್ಲಿ ಯಾರೂ ತಿಂದಿರಲಿಲ್ಲ.  ಯಾಕೆಂದರೆ, ನಾನು ಚಿಕ್ಕ ವಯಸ್ಸಿನಲ್ಲಿ ಆಟ ಆಡಲು ಗೆಳೆಯರ ಜೊತೆ ಹೊರಗಡೆ ಹೋಗುತ್ತಿದ್ದೆ. ಮನೆಯಲ್ಲಿ ಇರುತ್ತಿರಲಿಲ್ಲ. ಊಟಕ್ಕಾಗಿ ಮನೆಗೆ ಬರುತ್ತಿದ್ದೆ , ಉಳಿದ ಸಮಯ ಶಾಲೆ ಬಿಟ್ಟರೆ ಗೆಳೆಯರ ಮನೆಯ ಮುಂದೆ ಗೋಲಿ, ಕಬಡ್ಡಿ ಸೇರಿದಂತೆ ಇನ್ನಿತರ ಆಟಗಳಲ್ಲಿ ಕಳೆಯುತ್ತಿದ್ದೆ. ಆಗ  ತಾಯಿ ನನ್ನನ್ನು  ಹುಡುಕಿಕೊಂಡು ಬರುತ್ತಿದ್ದಳು. ಊರು ಸುತ್ತಿ ಸುತ್ತಿ ಸುಸ್ತಾದಾಗ ನನ್ನ ತಾಯಿ ನನ್ನ ಮೇಲೆ ಕೋಪಗೊಂಡು ಕಂಬಕ್ಕೆ ಕಟ್ಟಿ ಬಡಿದ ಘಟನೆಗಳು ಸಾಕಷ್ಟಿವೆ. ಆ ಹೊಡೆತಗಳೇ ನಾನು ಇವತ್ತು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿವೆ.
ನನ್ನ ತಾಯಿ ಜೀವನದ ಪ್ರತಿ ಗಳಿಗೆಯನ್ನು ಕಷ್ಟದಲ್ಲಿ ಕಳೆಯುವ ಮೂಲಕ ದುಡಿಮೆಯನ್ನು ನಂಬಿ ಜೀವನ ಸಾಗಿಸಿದ್ದಾಳೆ. ಅಂತೆಯೇ ತಂದೆಯೂ  ಕೂಡ. ನನ್ನ ತಂದೆ 20 ವರ್ಷಗಳ ಹಿಂದೆ ನಾನು ಸೇನೆಗೆ ಸೇರಲು ಹೋಗುವಾಗ ಬೆಳಗಾವಿವರೆಗೂ ಜೊತೆಗೆ ಬಂದ್ದಿದ್ದರು.
ನನ್ನ ಜೀವನದ ಪ್ರಮುಖ ಘಟನೆಗಳಲ್ಲಿ ಒಂದು ಎಂದರೇ, 2006ರ ಅಕ್ಟೋಬರ್ 28 ರಂದು ದೇಶವೆಲ್ಲಾ ದೀಪಾವಳಿ ಹಬ್ಬದ ಖುಷಿಯಲ್ಲಿತ್ತು, ಆ ದಿನ ನಾನು ದೇಶದ ಕಗ್ಗತ್ತಲ ಗಡಿಯಲ್ಲಿ ಪಾಕಿಸ್ತಾನದ ಉಗ್ರವಾದಿಗಳ ಜೊತೆ ಕಾಶ್ಮೀರದ ಗಡಿ ಭಾಗದಲ್ಲಿ ಹೋರಾಡಿ  ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಗಿದ್ದೆ.
ಅಂದು ಸಾವಿನ ಜೊತೆಗೆ ಹೋರಾಡಿ ಬಂದ ನಾನು, ಏನಾದರೂ ಸಾಧಿಸಬೇಕು ಎಂಬ ಛಲದಿಂದ ಕರ್ನಾಟಕದ ಅತ್ಯುನ್ನತ ಪರೀಕ್ಷೆಯಾದ  ಕೆಎಎಸ್‍ ನಲ್ಲಿ ತೇರ್ಗಡೆಯಾಗಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿದ್ದೇನೆ. ಇದು ನನಗೆ ತುಂಬಾ ಖುಷಿ ಕೊಡುತ್ತದೆ.

ಬದುಕು ಬದಲಿಸಿತು ಶಿಲ್ಪಾಶ್ರೀ ಕಂಪ್ಯೂಟರ್ಸ್ ನ ವಾಟ್ಸಾಪ್ ಗ್ರುಪ್:
ಇದು ಆಧುನಿಕ ಯುಗ, ಈಗ ಏನಿದ್ದರೂ ಕಂಪ್ಯೂಟರ್, ಆಂಡ್ರಾಯ್ಡ್ ಮೊಬೈಲ್ ಪೋನ್ ಗಳದ್ದೇ ದರ್ಬಾರ್. ಬಹುತೇಕರು ಮೊಬೈಲ್ ಇಲ್ಲದೇ ಬದುಕೇ ಇಲ್ಲ ಅಂದುಕೊಂಡಿದ್ದಾರೆ. ಇದೇ ಮೊಬೈಲ್ ಅದೆಷ್ಟೋ ಜನರ ಬದುಕು ಹಾಳಾಗುವಂತೆ ಮಾಡಿದ. ಮೊಬೈಲ್ ಗಳನ್ನು ಕೆಟ್ಟ ಕೆಲಸಗಳಿಗೆ ಬಳಸಿಕೊಂಡ ಬಹುತೇಕ ಯುವ ಸಮುದಾಯ ಹಾಳಾಗಿದೆ. ಆದರೆ ಕೆಲವರು ಇದೇ ಮೊಬೈಲ್ ಗಳನ್ನು ಬಳಸಿಕೊಂಡು ಜೀವನದಲ್ಲಿ ಅಂದುಕೊಂಡದನ್ನ ಸಾಧಿಸಿದ್ದಾರೆ. ಆಂಡ್ರಾಯ್ಡ್ ಮೊಬೈಲ್ ಇದ್ರೆ ಸಾಲದು ಅದಕ್ಕೆ ಇಂಟರ್ನೆಟ್ & ವಾಟ್ಸಾಪ್, ಫೇಸ್ಬುಕ್ ಗ್ರುಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳು ಅವಶ್ಯಕ. ಇದನ್ನ ಅರಿತುಕೊಂಡ ರಾಯಚೂರು ಜಿಲ್ಲೆ ಲಿಂಗಸುಗೂರಿನ ಶಿಲ್ಪಾಶ್ರೀ ಕಂಪ್ಯೂಟರ್ಸ್ ನ ಮಾಲಿಕ ಅಶೋಕ ನಾಯಕ ದಿದ್ದಿಗಿಯವರು ತಮ್ಮ ಸಂಸ್ಥೆಯ ಹೆಸರಿನಲ್ಲಿ ಶಿಲ್ಪಾಶ್ರೀ ಕಂಪ್ಯೂಟರ್ ಎಂಬ ವಾಟ್ಸಾಪ್ ಗ್ರುಪ್ ಮಾಡಿದ್ದಾರೆ. ಆ ಗ್ರುಪ್ ಗಳು ಬಹುತೇಕರಿಗೆ ನೆರವಾಗಿವೆ ಎನ್ನುತ್ತಾರೆ ಶಿವಾನಂದ ಪೂಜಾರಿ. 
ಶಿಲ್ಪಾಶ್ರೀ ಕಂಪ್ಯೂಟರ್ ವಾಟ್ಸಾಪ್ ಗ್ರುಪ್
ಶಿಲ್ಪಾಶ್ರೀ ಕಂಪ್ಯೂಟರ್ ವಾಟ್ಸಾಪ್ ಗ್ರುಪ್ ನಲ್ಲಿ ಕೆಎಎಸ್, ಐಎಎಸ್, ಪಿಎಸ್ಐ, ಪಿಡಿಒ ಸೇರಿದಂತೆ ಪ್ರತಿಯೊಂದು ಸರ್ಕಾರಿ ಹುದ್ದೆಗಳಿಗೆ ಅನುಕೂಲವಾಗುವ ರೀತಿಯ ನೋಟ್ಸ್, ಮಾಹಿತಿಗಳನ್ನು ಅಪ್ಡೇಟ್ ಮಾಡುತ್ತಾರೆ. ಅದು ಪ್ರತಿಯೊಬ್ಬ ವ್ಯಕ್ತಿಗೂ ಅನುಕೂಲವಾಗುತ್ತದೆ. ಈ ಸಾರಿ ಈ ಭಾಗದ ಐವರು ಕೆಎಎಸ್ ಪರೀಕ್ಷೆ ಪಾಸಾಗಿದ್ದು ಶಿಲ್ಪಾಶ್ರೀ ಕಂಪ್ಯೂಟರ್ ಗ್ರುಪ್ ನೆರವಾಗಿವೆ. ಅಲ್ಲದೇ ಮಾಲಿಕ ಅಶೋಕ ನಾಯಕ ದಿದ್ದಗಿಯವರು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಬೇಕಾದ ಮಾಹಿತಿಯನ್ನು ನೀಡುತ್ತಾರೆ. ಇದೆಲ್ಲವೂ ಉಚಿತವಾಗಿದೆ ಎಂದಿದ್ದಾರೆ ಶಿವಾನಂದ.
-------------------------------------------------------
(ಓದುಗ ಸ್ನೇಹಿತರು ಸುದ್ದಿಗಳನ್ನು, ವಿಶೇಷ ಲೇಖನ, ಅನಿಸಿಕೆ ಬರಹಗಳನ್ನು ನಮಗೆ ಕಳುಹಿಸಿದರೆ ನಾವು ಪ್ರಕಟಿಸುತ್ತೇವೆ. ದಾಖಲೆ, ಸಾಕ್ಷಿ ಸಹಿತ ಸುದ್ದಿಗಳಿಗೆ ಮಾತ್ರ ನಮ್ಮಲ್ಲಿ ಅವಕಾಶವಿದೆ.
ನಿಖರ ಸುದ್ದಿಗಳು, ಲೇಖನಗಳು, ಅನಿಸಿಕೆ ಬರಹಗಳು  ಇದ್ದಲ್ಲಿ ಇಮೇಲ್ ಮಾಡಿ: dorenewskannada@gmail.com )