Monday, November 28, 2022

ಖಾಶೆಂಪುರ್: ಸದ್ಗುರು ಸಚ್ಚಿದಾನಂದ ಸ್ವಾಮೀಜಿ ಮೂರ್ತಿ ಪ್ರತಿಷ್ಠಾಪನೆ; ಶಾಸಕ ಬಂಡೆಪ್ಪ ಖಾಶೆಂಪುರ್ ಭಾಗಿ


ಬೀದರ್ (ನ.28): ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದಲ್ಲಿ ಸೋಮವಾರ ನಡೆದ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ (ಚಿದಾನಂದ ಸ್ವಾಮೀಜಿ) ರವರ ನೂತನ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಪಾಲ್ಗೊಂಡರು.
ಇದೇ ವೇಳೆ ಗ್ರಾಮದ ಪ್ರಮುಖರೊಂದಿಗೆ ದೇವಸ್ಥಾನದ ಆವರಣದಲ್ಲಿ ಸಭೆ ನಡೆಸಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ಇದೇ ಡಿಸೆಂಬರ್ 04 ರಿಂದ 08ನೇ ತಾರೀಖಿನವರೆಗೆ ನಡೆಯಲಿರುವ ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ಜಾತ್ರಾ ಮಹೋತ್ಸವದ ಬಗ್ಗೆ ಚರ್ಚೆ ನಡೆಸಿ, ದೇವಸ್ಥಾನದ ಕಟ್ಟಡ ಕಾಮಗಾರಿ, ಜಾತ್ರಾ ಮಹೋತ್ಸವದ ಸಿದ್ದತೆಯ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕಮಠಾಣಾ ಗವಿಮಠದ ಶ್ರೀ ಶ್ರೀ ಶ್ರೀ ಷ.ಬ್ರ  108 ಸದ್ಗುರು ರಾಚೋಟೇಶ್ವರ ಶಿವಾಚಾರ್ಯ ಮಹಾರಾಜರು, ಇಟಗಾ ಮಠದ ಶ್ರೀ ಶರಣಯ್ಯ ಸ್ವಾಮಿ ಅರ್ಚಕರು, ಶ್ರೀ ಸದ್ಗುರು ಸಚ್ಚಿದಾನಂದ ಸ್ವಾಮೀಜಿ ದೇವಸ್ಥಾನದ ಅರ್ಚಕರಾದ ಶ್ರೀ ಶಿವಾನಂದ ಸ್ವಾಮೀಜಿರವರು, ಮಂಜುನಾಥ ಶಾಸ್ತ್ರಿ, ಧನಂಜಯ ಶಾಸ್ತ್ರಿ, ವಿಜಯಕುಮಾರ್ ಶಾಸ್ತ್ರಿ, ಚಿದಾನಂದ ಸ್ವಾಮಿ, ಬಸಯ್ಯಸ್ವಾಮಿ, ಸಿದ್ದಯ್ಯ ಸ್ವಾಮಿ, ಚಿದಾನಂದ ಸ್ವಾಮಿ, ಪ್ರಮುಖರಾದ ವಿಶ್ವನಾಥ ಬಾಲೆಬಾಯಿ, ಶರಣಪ್ಪ ಖಾಶೆಂಪುರ್, ಶಿವಪ್ಪ ಪೊಲೀಸ್ ಪಾಟೀಲ್, ರಾಜಕುಮಾರ ಪೊಲೀಸ್ ಪಾಟೀಲ್, ಭಜರಂಗ ತಮ್ಗೊಂಡ, ಆನಂದ ತಮ್ಗೊಂಡ, ಬಕ್ಕಪ್ಪ ಸುತಾರ್, ದೂಳಪ್ಪ ಪಟಣ್, ನರಸಪ್ಪ ಬಸ್ಗೊಂಡ, ಬಾಬು ಗುಮಾಸ್ತಿ, ಸತೀಶ್ ಗುಮಾಸ್ತಿ, ಮಂಜುನಾಥ ಬಾಲೆಬಾಯಿ, ಶಿವರಾಜ್ ಹಳ್ಳೊಳ್ಳಿ, ಬಸವರಾಜ ಬಂತಿಗಿ, ರಮೇಶ ಬಾಲೆಬಾಯಿ ಸೇರಿದಂತೆ ಅನೇಕರಿದ್ದರು.
Bandeppa Khashempur/ಬಂಡೆಪ್ಪ ಖಾಶೆಂಪುರ್ Bandeppa Khashempur Youth Brigade -R Bandeppa Kashempur ಬಂಡೆಪ್ಪ ಖಾಶೆಂಪುರ್ ಅಭಿಮಾನಿಗಳ ಬಳಗ #ಬಂಡೆಪ್ಪ #ಖಾಶೆಂಪುರ್ #ಬೀದರ್ #ದಕ್ಷಿಣ #ಶಾಸಕ #Bandeppa #Khashempur #Bidar #South #MLA

No comments:

Post a Comment