Monday, March 28, 2022

ಶಾಶ್ವತ ನೀರಿನ ಸೌಲಭ್ಯ ನೀಡಿ: ಶಾಸಕ ಬಂಡೆಪ್ಪ ಖಾಶೆಂಪುರ್

 

ಅಧಿವೇಶನದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾತು
ಬೀದರ್ (ಮಾ. 28): ಬೀದರ್ ಜಿಲ್ಲೆಯಲ್ಲಿ ಬಹುತೇಕವಾಗಿ ಬೋರ್ವೆಲ್ ಗಳ ಮೂಲಕವೇ ನೀರಿನ ಸೌಲಭ್ಯ ಒದಗಿಸಲಾಗುತ್ತಿದೆ. ಬೋರ್ವೆಲ್ ನೀರು ಶಾಶ್ವತವಾದದ್ದಲ್ಲ. ಇವತ್ತು ಇದ್ದ ನೀರು ನಾಳೆ ಇರುವುದಿಲ್ಲ. ಆಗಾಗಿ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಒದಗಿಸಿಕೊಡುವ ಕೆಲಸ ಮಾಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.

ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ಬಜೆಟ್ ಅಧಿವೇಶನದ ಹದಿನೇಳನೇ ದಿನದ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೆಜೆಎಂ (ಜಲ ಜೀವನ್ ಮಿಷನ್) ಯೋಜನೆ ಚನ್ನಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಸಹಾಯ ಸಿಗ್ತಿದೆ. ಆದರೇ ನೀರಿನ ಮೂಲಗಳ ಬಗ್ಗೆ ಗಮನಹರಿಸಬೇಕಾಗಿದೆ. ನಮ್ಮ ಬೀದರ್ ನಲ್ಲಿ ಶಾಶ್ವತವಾದ ನೀರಿನ ಮೂಲಗಳಿಲ್ಲ. ಕಾರಂಜಾ ಡ್ಯಾಂ ಇದೆ. ಅದರಿಂದ ಕೆಲ ತಾಲೂಕುಗಳಿಗೆ ನೀರಿನ ಸೌಲಭ್ಯ ಸಿಗುತ್ತಿದೆ.

ಪ್ರತಿ ವ್ಯಕ್ತಿಗೆ 55 ಲೀಟರ್ ನೀರು ಒದಗಿಸಬೇಕು ಎಂಬುದು ಜೆಜೆಎಂ ಯೋಜನೆಯ ಉದ್ದೇಶವಾಗಿದೆ. ನನ್ನ ಕ್ಷೇತ್ರದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕನೆಕ್ಷೆನ್ ಬಹುತೇಕ ಮುಗಿದಿದ್ದು ಸಚಿವರು ಅದನ್ನು ಪರಿಶೀಲನೆ ನಡೆಸಬೇಕು. ನಾವು ಬೋರ್ವೆಲ್ ಮೂಲದಿಂದ ನೀರನ್ನು ಒದಗಿಸುತ್ತಿದ್ದೇವೆ. ಇವತ್ತು ಇದ್ದ ನೀರು ನಾಳೇ ಇರಲ್ಲ. ಆಗಾಗಿ ಶಾಶ್ವತವಾದ ನೀರಿನ ಸೌಲಭ್ಯ ಒದಗಿಸಿಕೊಡುವ ಕೆಲಸ ಸರ್ಕಾರದಿಂದ ಆಗಬೇಕಾಗಿರುವುದು ಬಹಳಷ್ಟು ಅಗತ್ಯವಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.


ವಿಡಿಯೋಗಾಗಿ ಈ ಲಿಂಕ್ ಕ್ಲಿಕ್ ಮಾಡಿ


ಉದ್ಯೋಗ ಖಾತ್ರಿ ಬಗ್ಗೆ ಸಚಿವರು ಗಮನಹರಿಸಬೇಕು:

ನಾನು ನನ್ನ ಕ್ಷೇತ್ರದಲ್ಲಿ ಬಹಳಷ್ಟು ಕಡೆಗಳಲ್ಲಿ ಜನಸಂಪರ್ಕ ಸಭೆಗಳನ್ನು ಮಾಡ್ತಿದ್ದಿನಿ.  ಸಭೆಗಳಲ್ಲಿ ಇಒಗಳು ಸೇರಿದಂತೆ ಅನೇಕ ಅಧಿಕಾರಿಗಳು ಪಾಲುಗೊಳ್ಳುತ್ತಾರೆ. ಉದ್ಯೋಗ ಖಾತ್ರಿ ವಿಷಯದಲ್ಲಿ ಅಲ್ಲಿನ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸಚಿವರು ಯಾರಿಗಾದ್ರು ಜಾಬ್ ಕಾರ್ಡ್ ಸಿಕ್ಕಿಲ್ಲ. ಕೂಲಿ ಸಿಕ್ಕಿಲ್ಲ ಎಂದರೇ ಹೇಳಿ ಎಂದು ಹೇಳ್ತಿದ್ದಾರೆ. ಅಂತ ಪ್ರಕರಣಗಳು ಬಹಳಷ್ಟು ಇವೆ. ಬಹುತೇಕ ಕಡೆಗಳಲ್ಲಿ ಜಾಬ್ ಕಾರ್ಡ್ ಇದ್ದವರಿಗೆ ಕನಿಷ್ಟ 50 ದಿನ ಕೆಲಸ ಸಿಗುತ್ತಿಲ್ಲ.  ಕೆಲಸ ಸಿಕ್ಕಲ್ಲಿ ಕೂಲಿ ಸಿಗುತ್ತಿಲ್ಲ.

ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಗ್ರಾಮಸ್ಥರನ್ನು ವಿಚಾರಿಸಿದಾಗ ಅಂತಹ ಪ್ರಕರಣಗಳು ಕಂಡುಬಂದಿವೆ. ಸಚಿವರು ಮಾಹಿತಿ ತರಿಸಿಕೊಳ್ಳಬೇಕು. ನಮಗೆ ಉದ್ಯೋಗ ಖಾತ್ರಿಯ ಕೂಲಿ ಸಿಗುತ್ತಿಲ್ಲ ಎಂದು ಅನೇಕರು ಪೋನ್ ಮಾಡಿ ಹೇಳುತ್ತಿದ್ದಾರೆ. ಕೆಳ ಹಂತದ ಆಡಳಿತ ವ್ಯವಸ್ಥೆ ಸುಧಾರಣೆಯಾಗ್ಬೇಕಾಗಿದೆ. ಸಚಿವರು ಈ ಬಗ್ಗೆ ಗಮನಹರಿಸಬೇಕೆಂದು ಸಚಿವ ಕೆ.ಎಸ್ ಈಶ್ವರಪ್ಪರವರಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು.

ಬೆಂಗಳೂರಿನಲ್ಲಿನ ಟ್ರಾಫಿಕ್ ಸಮಸ್ಯೆ. ಬಜೆಟ್ ಹಂಚಿಕೆಯಲ್ಲಿನ ತಾರತಮ್ಯ, ಬೀದರ್ ನ ಕಾರಂಜಾ ಸಂತ್ರಸ್ತ ರೈತರಿಗೆ ಪರಿಹಾರ ನೀಡುವ ವಿಚಾರ, ಬೀದರ್ ಜಿಲ್ಲೆಯ ಕೆರೆ ತುಂಬಿಸುವ ಯೋಜನೆ, ಸಹಕಾರ ಇಲಾಖೆಯ ಯೋಜನೆಗಳು, ಎಪಿಎಂಸಿ ವ್ಯವಸ್ಥೆಯ ಸುಧಾರಣೆ, ರೈತರ ಸಾಲಮನ್ನಾ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸದನದಲ್ಲಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡಿದರು.

No comments:

Post a Comment