Monday, March 28, 2022

ರೈತರ, ಬಡವರ ಪರ ಸದನದಲ್ಲಿ ಧ್ವನಿ ಎತ್ತಿದ ಶಾಸಕ ಬಂಡೆಪ್ಪ ಖಾಶೆಂಪುರ್

 

ಸದನದಲ್ಲಿ ಮಾತಾಡುತ್ತಿರುವ ಶಾಸಕ ಬಂಡೆಪ್ಪ ಖಾಶೆಂಪುರ್
ಬೀದರ್ (ಮಾ.23): ಜಿಲ್ಲೆಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ, ಬೀದರ್ ಜಿಲ್ಲೆಯ 33 ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೊಳಿಸುವಂತೆ, ಕಾರಂಜಾ ಸಂತ್ರಸ್ತ ರೈತರಿಗೆ ಪರಿಹಾರ ನೀಡುವಂತೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರವನ್ನು ಒತ್ತಾಯಿಸಿದರು.

ಭಾಷಣದ ವಿಡಿಯೋಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ನಡೆದ ಬಜೆಟ್ ಅಧಿವೇಶನದ ಹದಿನೇಳನೇ ದಿನದ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಲಮನ್ನಾ ಯೋಜನೆಯಿಂದ ಹೊರ ಉಳಿದ 13  ಸಾವಿರಕ್ಕೂ ಹೆಚ್ಚಿನ ರೈತರ ಸಾಲಮನ್ನಾ, ಯಶಸ್ವಿನಿ ಯೋಜನೆ, ರೈತರಿಗೆ ನೀಡುತ್ತಿರುವ ಲೋನ್ ಮೊತ್ತವನ್ನು ಹೆಚ್ಚಿಸುವುದು, ಬಡವರ ಬಂಧು, ಬೀದಿಬದಿ ವ್ಯಾಪಾರಿಗಳ ಸಾಲಮನ್ನಾ, ಎಪಿಎಂಸಿ ವ್ಯವಸ್ಥೆ ಸುಧಾರಣೆ, ರಾಗಿ ಖರೀದಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದರು.

No comments:

Post a Comment