ದೊರೆನ್ಯೂಸ್: ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದಲ್ಲಿದ್ದ ವಾಲ್ಮೀ
ಕಿ ವೃತ್ತವನ್ನು ವಾಲ್ಮೀಕಿ ಜಯಂತಿಯ ಮುನ್ನವೇ ಪುನರ್ ನಿರ್ಮಾಣ ಮಾಡಬೇಕೆಂದು ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯ ಮುಖಂಡರು ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ್ ರವರಿಗೆ ಮನವಿ ಮಾಡಿದ್ದಾರೆ.
ನಗರದಲ್ಲಿ ಮೊದಲಿದ್ದ ವಾಲ್ಮೀಕಿ ವೃತ್ತವನ್ನು ಕಳೆದ ಎರಡು ವರ್ಷಗಳ ಹಿಂದೆ ರಸ್ತೆ ಕಾಮಗಾರಿ ಸಲುವಾಗಿ ತೆರಳುಗೊಳಿಸಲಾಗಿದ್ದು, ಇದುವರೆಗೆ ಪುನರ್ ನಿರ್ಮಾಣ ಮಾಡಿಲ್ಲ. ವಾಲ್ಮೀಕಿ ಜಯಂತೋತ್ಸವದ ಮುನ್ನವೇ ಪುನರ್ ನಿರ್ಮಾಣ ಮಾಡಬೇಕೆಂದು ಶಾಸಕರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಶಾಸಕರು ಬರವಸೆ ನೀಡಿದ್ದಾರೆ: ಸತ್ಯಪ್ಪ ಬಸಾಪುರ್
ವಾಲ್ಮೀಕಿ ಜಯಂತೋತ್ಸವದ ಮುನ್ನವೇ ವೃತ್ತವನ್ನು ಪುನರ್ ನಿರ್ಮಾಣ ಮಾಡಲು ಸೂಚಿಸುವೆನೆಂದು ಶಾಸಕರು ಬರವಸೆ ನೀಡಿದ್ದಾರೆಂದು ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯ ಅಧ್ಯಕ್ಷ ಸತ್ಯಪ್ಪ ಬಸಾಪುರ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆಯ ಅದ್ಯಕ್ಷ ಸತ್ಯಪ್ಪ ಬಸಾಪೂರ, ಉಪಾಧ್ಯಕ್ಷ ಕನಕಪ್ಪ ನಾಯಕ, ಮುಖಂಡರಾದ ಮದಕರಿ ನಾಯಕ, ಅಡಿವೇಶ್ ಹಾಜಾಳ್, ಕನಕಪ್ಪ ಅಳ್ಳಳ್ಳಿ, ಸುರೇಶ್ ಜರಕುಂಟಿ, ದ್ಯಾಮಣ್ಣ ತಳವಾರ್ ಸೇರಿದಂತೆ ಅನೇಕರು ಇದ್ದರು.
No comments:
Post a Comment