ದೊರೆನ್ಯೂಸ್: ಕರ್ನಾಟಕ ಪ್ರಜಾಶಕ್ತಿ ಸಮಿತಿಯ ಮಾನ್ವಿ ತಾಲೂಕಿನ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಮಾನ್ವಿಯ ಪ್ರವಾಸಿ ಮಂದಿರದಲ್ಲಿ ಇಂದು ನಡೆಯಿತು.
![]() |
ಕರ್ನಾಟಕ ಪ್ರಜಾಶಕ್ತಿ ಸಮಿತಿಯ ಮುಖಂಡರೊಂದಿಗೆ ನೂತನ ಪದಾಧಿಕಾರಿಗಳು |
ಜಿಲ್ಲಾಧ್ಯಕ್ಷ ಸೂರಿ ಹುಸೇನಪ್ಪ ನಾಯಕ ನೇತೃತ್ವದಲ್ಲಿ ಮಾನ್ವಿ ತಾಲೂಕು ಘಟಕದ ಮುಖಂಡರ ಸಭೆ ಕರೆಯುವ ಮೂಲಕ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ಕನ್ನಡ ತಾಯಿ ಭುವನೇಶ್ವರಿ ದೇವಿಯ ಒಳಿತಿಗಾಗಿ ಕಾಯಾ ವಾಚಾ ಮನಸ್ಸಿನಿಂದ ಕೆಲಸ ಮಾಡಬೇಕು, ಕನ್ನಡ ನಾಡಿನ ಋಣ ತೀರಿಸುವ ಕೆಲಸ ಮಾಡಬೇಕು, ಸಮಾಜದ ಒಳಿತಿಗಾಗಿ ನಿಸ್ವಾರ್ಥ ಸೇವೆ ಮಾಡಬೇಕೆಂದು ಜಿಲ್ಲಾಧ್ಯಕ್ಷ ಸೂರಿ ಹುಸೇನಪ್ಪ ನಾಯಕ ಇದೇ ಸಂದರ್ಭದಲ್ಲಿ ಕರೆ ನೀಡಿದರು.
ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಕೆ.ಶ್ರೀನಿವಾಸ್ ಸಿರವಾರ, ಆಂಜನೇಯ ನಾಯಕ, ನರಸಿಂಹ ನಾಯಕ ಸೇರಿದಂತೆ ಅನೇಕರು ಇದ್ದರು.
ನೂತನ ಪದಾಧಿಕಾರಿಗಳ ವಿವರ:
ಆಂಜನೇಯ ನಾಯಕ (ತಾಲೂಕು ಅಧ್ಯಕ್ಷ), ಪ್ರದೀಪ್ ನಂದಿನಿ (ಉಪಾಧ್ಯಕ್ಷ), ಎಸ್ ಬಸವರಾಜ್ ನಾಯಕ (ಪ್ರಧಾನ ಕಾರ್ಯದರ್ಶಿ), ಸಾಗರ್ (ಸಂಘಟನಾ ಕಾರ್ಯದರ್ಶಿ), ರವಿಕುಮಾರ್ (ಖಜಾಂಚಿ), ಚಾಂದ್ ಪಾಷಾ (ಗೌರವಾಧ್ಯಕ್ಷ), ಬಸವ ಗೂಳಿ, ಮಾರುತಿ ಮುಸ್ಟೂರು, ಇಲಿಯಾಸ್, ಕಪ್ಪಗಲ್ ಬಸವ ನಾಯಕ, ಪುರುಷೋತ್ತಮ ನಾಯಕ, ಹನುಮಂತ್ರಾಯ ನಾಯಕ, ಆದಿ ನಾಯಕ, ವಿನೋದ ಕುಮಾರ್, ವೀರೇಶ್ ನಾಯಕ, ಶಿವಕುಮಾರ್ ನಾಯಕ, ಶರಣಯ್ಯ ಸ್ವಾಮಿ, ಈರಣ್ಣ, ಹುಸೇನಿ, ಮಹಾದೇವ, ಅಶೋಕ ಕುಮಾರ್, ಶಿವರಾಜ್ ಎಟಿಎಂ, ರಮೇಶ್, ಚೆನ್ನ, ಮೆಹಬೂಬ್, ಇಸ್ಮಾಯಿಲ್, ವೀರೇಶ್ ನಾಯಕ ಎಲ್ಎಲ್ಬಿ (ಸದಸ್ಯರು).
ವರದಿ: ಅಂಬಣ್ಣ ನಾಯಕ ಉಮಳಿ ಹೊಸೂರು
No comments:
Post a Comment